ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ರವರ ತಾಯಿ ನಿಧನ

Prasthutha|

- Advertisement -

ತಿರುವನಂತಪುರ: ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ರವರ ತಾಯಿ ನಿಧನರಾಗಿದ್ದಾರೆ.

ಅನ್ವರ್ ಸಾದಾತ್ ಅವರ ತಾಯಿ ಲೈಲಾ ಬೀವಿಯವರಿಗೆ ನಿನ್ನೆ ಹಠಾತ್ ಎದೆ ನೋವು ಕಾಣಿಸಿಕೊಂಡಿದೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೇರಳದ ತಿರುವನಂತಪುರದಲ್ಲಿ ಇಹಲೋಕ ತ್ಯಜಿಸಿದ್ದಾರೆ.

- Advertisement -

ತಾಯಿಯ ಜನಾಝ ಕೇರಳದ ತಿರುವನಂದಪುರಂ ನಲ್ಲಿದೆ. ಅಂತ್ಯಕ್ರಿಯೆಯು ಲುಹರ್ ನಮಾಝ್ (ಆದಿತ್ಯವಾರ) ಬಳಿಕ ಅಟ್ಟಿಂಗಲ್ ಸಮೀಪದ ಕಾಡುವಯ್ಲ್ ಜುಮಾ ಮಸೀದಿಯ ಕಬರ್ಸ್ತಾನದಲ್ಲಿ ನಡೆಯಲಿದೆ ಎಂದು ಅನ್ವರ್ ಸಾದತ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಎಸ್ ಡಿಪಿ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸಂತಾಪ ಸೂಚಿಸಿದ್ದು, ಅವರಿಗೆ ಅಲ್ಲಾಹನು ಮಘ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಹೇಳಿದ್ದಾರೆ.



Join Whatsapp
Exit mobile version