Home ಟಾಪ್ ಸುದ್ದಿಗಳು ಈಶ್ವರಪ್ಪ ವಿರುದ್ಧ ಮತ್ತೇ ಕೇಸ್ : ದೆಹಲಿಯಲ್ಲಿ ಮಾಜಿ ಸಚಿವರ ಕತ್ತಿಗೆ ಬಿತ್ತು ಧ್ವಜದ ಉರುಳು

ಈಶ್ವರಪ್ಪ ವಿರುದ್ಧ ಮತ್ತೇ ಕೇಸ್ : ದೆಹಲಿಯಲ್ಲಿ ಮಾಜಿ ಸಚಿವರ ಕತ್ತಿಗೆ ಬಿತ್ತು ಧ್ವಜದ ಉರುಳು

ಶಿವಮೊಗ್ಗ: ಮುಂದೊಂದು ದಿನ ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಿಸುತ್ತೇವೆ ಎಂದಿದ್ದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಆಪ್ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ದೆಹಲಿಯಲ್ಲಿ ದೂರು ದಾಖಲಿಸಿದ್ದಾರೆ.

ಈಶ್ವರಪ್ಪ ಬಂಧಿಸಬೇಕು ಅಂತ ನಾರ್ಥ್ ಅವೆನ್ಯೂ ಠಾಣೆಯಲ್ಲಿ ಕೇಸ್ ದಾಖಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿದ ಈಶ್ವರಪ್ಪ, ಯಾರೋ ಪ್ರಚಾರಕ್ಕಾಗಿ ದೂರು ನೀಡಿದ್ದಾರೆ ಅಷ್ಟೇ. ಇದರಿಂದ ಏನು ಪ್ರಯೋಜನ ಇಲ್ಲ. ನನ್ನನ್ನು ಬಂಧಿಸೊಕೆ ಆಗಲ್ಲ. ಇಂಥಾ ನೂರು ಕೇಸ್ ದಾಖಲಾದ್ರೂ ಎದುರಿಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ

ಗುತ್ತಿಗೆದಾರನಿಂದ 40% ಕಮಿಷನ್ ಪಡೆದಿದ್ದಾರೆ ಎಂಬ ಆರೋಪದಲ್ಲಿ ಸಚಿವಗಿರಿ ಕಳೆದುಕೊಂಡಿರುವ ಈಶ್ವರಪ್ಪ ಕತ್ತಿಗೆ ಇದೀಗ ಮತ್ತೊಂದು ಉರುಳು ಬಿದ್ದಿದೆ.

Join Whatsapp
Exit mobile version