Home ಟಾಪ್ ಸುದ್ದಿಗಳು ಎಡಿಟ್ ವೀಡಿಯೋವನ್ನು ಆಧರಿಸಿ ಸಿದ್ದರಾಮಯ್ಯರನ್ನು ಟೀಕಿಸಿದ ಅನಂತಕುಮಾರ್ ಹೆಗಡೆ

ಎಡಿಟ್ ವೀಡಿಯೋವನ್ನು ಆಧರಿಸಿ ಸಿದ್ದರಾಮಯ್ಯರನ್ನು ಟೀಕಿಸಿದ ಅನಂತಕುಮಾರ್ ಹೆಗಡೆ

ಕಾರವಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ, ಮುರುಕುರಾಮಯ್ಯನ ಗ್ಯಾರಂಟಿಗಳು ಏನೂ ಉಳಿಯುವುದಿಲ್ಲ. ಕೊನೆಗೆ ಉಳಿಯೋದು ಮೋದಿ ಗ್ಯಾರಂಟಿನೇ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ, ತಿರುಚಿದ ವೀಡಿಯೋ ನೋಡಿ ಅದರ ಆಧಾರದಲ್ಲಿ ಸಿಎಂರನ್ನು ಟೀಕಿಸಿದ್ದಾರೆ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು ಕೇಳಿದ್ದೀರಾ? ಚುನಾವಣೆ ಸಂದರ್ಭದಲ್ಲಿ ಹೇಳ್ತಿವಪ್ಪ, ಹೇಳಿದ್ದೆಲ್ಲಾ ಮಾಡಕಾಯ್ತದಾ? ದುಡ್ಡು ಎಲ್ಲಿಂದ ತರೋದು? ಇದೇ ಭಾಷೆಲೀ ಹೇಳಿದ್ದು ನೆನಪಿದ್ಯಾ ಎಂದು ಕಾರ್ಯಕರ್ತರನ್ನು ಕೇಳಿದರು. ಅಲ್ಲದೆ, ಬುದ್ಧಿವಂತರು ಇದನ್ನು ಅರ್ಥಮಾಡಿಕೊಳ್ಳಬೇಕು. ಅವರ ನಾಟಕದ ಭಾಷಣಕ್ಕೆ ಮರುಳಾಗಬಾರದು ಎಂದಿದ್ದಾರೆ.

ಸದನದಲ್ಲಿ ಮಾಜಿ ಸಿಎಂ ಯಡಿಯೂರಪ್ಪರ ಮಾತನ್ನು ಹೇಳುತ್ತಾ, “ಚುನಾವಣೆ ಸಂದರ್ಭದಲ್ಲಿ ಹೇಳ್ತಿವಪ್ಪ, ಹೇಳಿದ್ದೆಲ್ಲಾ ಮಾಡಕಾಯ್ತದಾ, ದುಡ್ಡು ಎಲ್ಲಿಂದ ತರೋದು”ಎಂದು ಯಡಿಯೂರಪ್ಪ ಹೇಳಿದ್ದನ್ನು ನೆನಪಿಸಿದ್ದರು. ಬಿಜೆಪಿ ನಾಯಕರು ಆ ವೀಡಿಯೋದಲ್ಲಿ ಯಡಿಯೂರಪ್ಪ ಹೇಳಿದ್ದಾರೆ ಎಂಬ ಅಂಶವನ್ನು ಕಟ್ ಮಾಡಿಸಿ, ಸಿದ್ದರಾಮಯ್ಯ ಹೀಗೆ ಹೇಳಿದ್ದಾರೆ ಎಂದು ಪ್ರಚರಿಸಿದ್ದರು. ಇದಕ್ಕೆ ಪೂರ್ತಿ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಿಎಂ ಸಿದ್ದರಾಮಯ್ಯ ಹಾಕಿ, ಬಿಜೆಪಿ ನಾಯಕರ ಸುಳ್ಳನ್ನು ಬಯಲು ಮಾಡಿದ್ದರು. ಇದೀಗ ಅದೇ ತಿರುಚಿದ ವೀಡಿಯೋ ಆಧಾರದಲ್ಲಿ ಅನಂತ ಕುಮಾರ್ ಹೆಗಡೆ ಸಿಎಂ ಸಿದ್ದರಾಮಯ್ಯರನ್ನು ಟೀಕಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಮನೆಯಲ್ಲೇ ಕುಳಿತಿದ್ದ ಅನಂತ್ ಕುಮಾರ್ ಹೆಗಡೆ ಈಗ ಲೋಕಸಭೆ ಚುನಾವಣೆ ಸಮೀಪದಲ್ಲಿರುವಾಗ ಟಿಕೆಟ್​ಗಾಗಿ ಕಾರ್ಯಕರ್ತರೊಂದಿಗೆ ಬೆರೆಯುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡುವಾಗ ಹೆಗಡೆ ಸ್ವಲ್ಪ ತಡವರಿಸಿದಂತೆ ಕಂಡುಬಂದರು.

Join Whatsapp
Exit mobile version