Home ಟಾಪ್ ಸುದ್ದಿಗಳು ಬಕ್ರೀದ್ ನಮಾಝ್ ಮಾರ್ಗಸೂಚಿಯಲ್ಲಿ ತಿದ್ದುಪಡಿ! ಹೊಸ ಆದೇಶದಲ್ಲೇನಿದೆ?

ಬಕ್ರೀದ್ ನಮಾಝ್ ಮಾರ್ಗಸೂಚಿಯಲ್ಲಿ ತಿದ್ದುಪಡಿ! ಹೊಸ ಆದೇಶದಲ್ಲೇನಿದೆ?

ಬೆಂಗಳೂರು: ಜು.21ರಂದು ಆಚರಿಸಲಾಗುವ ಬಕ್ರೀದ್ ಆಚರಣೆಗೆ ನಿನ್ನೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧಿಸಿ ಆಯಾ ಮಸೀದಿಗಳಲ್ಲಿ 50 ಜನರನ್ನು ಮೀರದಂತೆ ಕೋವಿಡ್ ನಿಯಂತ್ರಣ ಕ್ರಮಗಳೊಂದಿಗೆ ಪ್ರಾರ್ಥನೆ ಸಲ್ಲಿಸಲು ಮಾರ್ಗಸೂಚಿಯಲ್ಲಿ ಆದೇಶಿಸಲಾಗಿತ್ತು.

ಆದರೆ ಇಂದು ಹೊಸ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದ್ದು, ‘ಆಯಾ ಮಸೀದಿಗಳಲ್ಲಿ 50ಜನರು ಮೀರದಂತೆ’ ಬದಲಾಗಿ ‘ಆಯಾ ಮಸೀದಿಗಳ ಸಾಮಾರ್ಥ್ಯಕ್ಕೆ ಅನುಗುಣವಾಗಿ ಶೇಕಡಾ 50ರಷ್ಟು ಜನರು ಮೀರದಂತೆ’ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.


		    
Join Whatsapp
Exit mobile version