Home ಟಾಪ್ ಸುದ್ದಿಗಳು ಪಾದ್ರಿಗಳ ಮೇಲೆ ಸಂಘಪರಿವಾರದಿಂದ ಅಮಾನುಷ ಹಲ್ಲೆ

ಪಾದ್ರಿಗಳ ಮೇಲೆ ಸಂಘಪರಿವಾರದಿಂದ ಅಮಾನುಷ ಹಲ್ಲೆ

ಚತ್ತೀಸ್’ಗಢ: ಹಿಂದೂಗಳನ್ನು ಅಕ್ರಮವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಕ್ರಿಶ್ಚಿಯನ್ ಪಾದ್ರಿಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಚತ್ತೀಸ್’ಗಢದ ರಾಯ್’ಪುರದಲ್ಲಿ ನಡೆದಿದೆ.

ಹಿಂದೂಗಳನ್ನು ಅಕ್ರಮವಾಗಿ ಮತಾಂತರ ಮಾಡಲಾಗುತ್ತಿರುವ ಕುರಿತು ಸಂಘಪರಿವಾರದ ಕಾರ್ಯಕರ್ತರು ಸ್ಥಳೀಯ ಠಾಣೆಗೆ ದೂರು ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಯ್’ಪುರ ಪೊಲೀಸರು ಇಬ್ಬರು ಪಾದ್ರಿಗಳನ್ನು ಠಾಣೆಗೆ ಕರೆಯಿಸಿದ್ದರು. ಈ ವೇಳೆ ಅಕ್ರಮವಾಗಿ ಠಾಣೆಗೆ ನುಗ್ಗಿದ ಸಂಘಪರಿವಾರದ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ಪಾದ್ರಿಗಳಿಗೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ.

ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಘಪರಿವಾರದ ಗೂಂಡಾಗಳು ಗುಂಪು ಕಟ್ಟಿ ಹಲ್ಲೆ ನಡೆಸುತ್ತಿರುವುದು ಸೆರೆಯಾಗಿದೆ.

Join Whatsapp
Exit mobile version