ಅದ್ಯಪಾಡಿ ಸಂಪರ್ಕ ಸೇತುವೆ ಕುಸಿತ: ಸ್ಥಳಕ್ಕೆ ಮಾಜಿ ಶಾಸಕ ಬಾವ ಭೇಟಿ

Prasthutha|


ಮಂಗಳೂರು: ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಅದ್ಯಪಾಡಿಯ ಸಂಪರ್ಕ ಸೇತುವೆಯ ಇಕ್ಕೆಲಗಳು ಕುಸಿದಿದ್ದು, ಸ್ಥಳಕ್ಕೆ ಮಾಜಿ ಶಾಸಕ ಮೊಹಿದ್ದೀನ್ ಬಾವ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

ಕಳೆದ ಕೆಲ ದಿನಗಳಿಂದ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ‌ ಮಳೆ ಸುರಿಯುತ್ತಿದ್ದು, ಹಲವು ಕಡೆಗಳಲ್ಲಿ ಹಾನಿಯಾಗಿದೆ. ಇಂದು ಅದ್ಯಪಾಡಿಯ ಸಂಪರ್ಕ ಸೇತುವೆಯ ಇಕ್ಕೆಲಗಳು ಕುಸಿದಿದ್ದು ತಕ್ಷಣ ಮಾಹಿತಿ ಪಡೆದ ಮಾಜಿ ಶಾಸಕ ಬಾವ ಸ್ಥಳಕ್ಕೆ ಭೇಟಿ, ಸಂಬಂಧಪಟ್ಟ ಅಧಿಕಾರಿಗಳಿಗೆ‌ ಕರೆ ಮಾಡಿ ಸಮಸ್ಯೆ ಪರಿಹಾರ ಮಾಡುವಂತೆ ಒತ್ತಾಯಿಸಿದರು. ಅಲ್ಲದೆ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು.

Join Whatsapp
Exit mobile version