Home ಟಾಪ್ ಸುದ್ದಿಗಳು ವಿದ್ಯಾರ್ಥಿನಿಯರ ಪರ ವಕೀಲ ದೇವದತ್ತ್ ಕಾಮತ್ ವಿರುದ್ಧ ವಾಗ್ದಾಳಿ: ಸುಪ್ರೀಂಕೋರ್ಟ್ ವಕೀಲರ ಖಂಡನೆ

ವಿದ್ಯಾರ್ಥಿನಿಯರ ಪರ ವಕೀಲ ದೇವದತ್ತ್ ಕಾಮತ್ ವಿರುದ್ಧ ವಾಗ್ದಾಳಿ: ಸುಪ್ರೀಂಕೋರ್ಟ್ ವಕೀಲರ ಖಂಡನೆ

ಬೆಂಗಳೂರು: ಶಿರವಸ್ತ್ರ ನಿಷೇಧವನ್ನು ಪ್ರಶ್ನಿಸಿ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಯ ಪರವಾಗಿ ಕರ್ನಾಟಕ ಹೈಕೋರ್ಟ್ ನಲ್ಲಿ ವಾದಿಸುತ್ತಿರುವ ಸುಪ್ರೀಂಕೋರ್ಟ್ ಹಿರಿಯ ವಕೀಲ ದೇವದತ್ತ್ ಕಾಮತ್ ಅವರಿಗೆ ಸುಪ್ರೀಂಕೋರ್ಟ್ ಯಂಗ್ ಲಾಯರ್ಸ್ ಫೋರಂ ಬೆಂಬಲ ಸೂಚಿಸಿದೆ.

ವಿದ್ಯಾರ್ಥಿನಿಯರ ಪರ ಕರ್ನಾಟಕ ಹೈಕೋರ್ಟ್ ನಲ್ಲಿ ವಾದಿಸುತ್ತಿರುವ ದೇವದತ್ತ್ ಕಾಮತ್ ಅವರ ವಿರುದ್ಧ ನಡೆಯುತ್ತಿರುವ ವಾಗ್ದಾಳಿ ಖಂಡನೀಯ. ಅರ್ಜಿದಾರರನ್ನು ಪ್ರತಿನಿಧಿಸಿ ವಾದ ಮಂಡಿಸುವುದು ಒಬ್ಬ ವಕೀಲನ ಕರ್ತವ್ಯ. ವಕೀಲರೊಬ್ಬರು ತಾವು ಆಯ್ಕೆ ಮಾಡಿಕೊಂಡ ಅರ್ಜಿಯ ವಿಷಯವನ್ನು ಮುಂದಿಟ್ಟು ಅವರ ಮೇಲೆ ವಾಗ್ದಾಳಿ ನಡೆಸುವುದು ಖಂಡನೀಯ. ಇದು ನ್ಯಾಯ ವ್ಯವಸ್ಥೆಯಲ್ಲಿ ಗಂಭೀರ ಅಡಚಣೆಯನ್ನು ಉಂಟು ಮಾಡುತ್ತದೆ ಎಂದು ಫೋರಂನ ಅಧ್ಯಕ್ಷ ವಿಕಾಸ್ ಬನ್ಸಾಲ್ ತಿಳಿಸಿದ್ದಾರೆ.

Join Whatsapp
Exit mobile version