Home ಕರಾವಳಿ ಅಡ್ಡೂರು: “ಅಂಧಕಾರದಿಂದ ಪ್ರಕಾಶದೆಡೆಗೆ” ಕಾರ್ಯಕ್ರಮ

ಅಡ್ಡೂರು: “ಅಂಧಕಾರದಿಂದ ಪ್ರಕಾಶದೆಡೆಗೆ” ಕಾರ್ಯಕ್ರಮ

ಅಡ್ಡೂರು: ಸೌತ್ ಕರ್ನಾಟಕ ಸಲಫಿ ಮೂವ್’ಮೆಂಟ್(SKSM) ಇದರ ಅಡ್ಡೂರು ಘಟಕ ಮತ್ತು SKSM ಯೂತ್ ವಿಂಗ್ ಅಡ್ಡೂರು ಘಟಕ ಇದರ ಜಂಟಿ ಆಶ್ರಯದಲ್ಲಿ “ಅಂಧಕಾರದಿಂದ ಪ್ರಕಾಶದೆಡೆಗೆ” ಎಂಬ ಧ್ಯೇಯ ವಾಕ್ಯದಲ್ಲಿ ಧಾರ್ಮಿಕ ಕಾರ್ಯಕ್ರಮವು ಮಗ್ರೀಬ್ ನಮಾಝ್ ನ ಬಳಿಕ ಅಡ್ಡೂರು ಜಂಕ್ಷನ್ ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಬಾರಿಶ ಕಿರಾಅತ್ ಪಠಿಸಿದರು. ಫೌಝಾನ್ ಅತಿಥಿಗಳನ್ನು ಸ್ವಾಗತಿಸಿದರು. ವಲೀದ್ ಹುಸೈನ್ ಪ್ರಾಸ್ತಾವಿಕ ಪ್ರವಚನ ನೀಡಿದರು. SKSM ನ ಕೇಂದ್ರ ಸಮಿತಿಯ ಅಧ್ಯಕ್ಷರಾದ ಬಶೀರ್ ಅ‌ಹಮದ್ ಶಾಲಿಮಾರ್ ರವರು ಒಗ್ಗಟ್ಟಾಗಿ ಈ ತೌಹೀದ್(ಏಕದೇವ ವಿಶ್ವಾಸ)ನ ಸುಂದರ‌ ಸಂದೇಶವನ್ನು ಸಾರೋಣ ಎಂದು ಶುಭ ಹಾರೈಸಿದರು. ಉಸ್ತಾದ್ ಮುಸ್ತಫಾ ದಾರಿಮಿಯವರು ತೌಹೀದ್ ಎಂಬ ವಿಷಯದಲ್ಲಿ ಬ್ಯಾರಿ ಭಾಷೆಯಲ್ಲಿ ಮತ್ತು ಮೌಲವಿ ಉನೈಸ್ ಪಾಪಿನಶ್ಶೇರಿ ಯವರು ಪ್ರತಿಯೊಂದು ಶರೀರವು ಮರಣದ ರುಚಿಯನ್ನು ಅನುಭವಿಸಲಿದೆ  ಎಂಬ  ವಿಷಯದಲ್ಲಿ ಪ್ರವಚನ ನೀಡಿದರು.

ವೇದಿಕೆಯಲ್ಲಿ ಬಶೀರ್ ಅಹ್ಮದ್ ಶಾಲಿಮಾರ್, ರಿಯಾಝ್ ಅಹಮದ್, ಹಸನ್ ಸಚ್ಚರಿಪೇಟೆ‌, ಅಬ್ದುಲ್ ಸತ್ತಾರ್ ಆಸ್ಕೋ, ಅಬ್ದುಲ್ ಮುನೀರ್, ಶೌಕತ್ ಅಲಿ, ಅಬ್ದುಲ್ ರಹ್ಮಾನ್ ಬಂಡಸಾಲೆ, ಅಶ್ರಫ್ ಕುದ್ರೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು

Join Whatsapp
Exit mobile version