Home ಟಾಪ್ ಸುದ್ದಿಗಳು ದೇವರಿಗೆ ಅರ್ಪಿಸಿದ ಬಾದಾಮಿ ಕಳ್ಳತನದ ಆರೋಪ: 11 ಹರೆಯದ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿದ ದುಷ್ಕರ್ಮಿಗಳು

ದೇವರಿಗೆ ಅರ್ಪಿಸಿದ ಬಾದಾಮಿ ಕಳ್ಳತನದ ಆರೋಪ: 11 ಹರೆಯದ ಬಾಲಕನನ್ನು ಮರಕ್ಕೆ ಕಟ್ಟಿ ಹಾಕಿದ ದುಷ್ಕರ್ಮಿಗಳು

ಭೋಪಾಲ್: ದೇವರಿಗೆ ಅರ್ಪಿಸಿದ ಬಾದಾಮಿಯನ್ನು ಕಳ್ಳತನ ಮಾಡಿ ತಿಂದ ಆರೋಪ ಹೊರಿಸಿ 11 ವರ್ಷದ ಬಾಲಕನನ್ನು ದೇವಸ್ಥಾನದ ಆರ್ಚಕ ಮತ್ತು ಮತ್ತೊಬ್ಬ ಯುವಕ ಮರವೊಂದಕ್ಕೆ ಕಟ್ಟಿ ಹಾಕಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಿಂದ ವರದಿಯಾಗಿದೆ.

ಸಿದ್ಧಯತನ್ ಜೈನ್ ದೇವಸ್ಥಾನದಲ್ಲಿ ದೇವರಿಗೆ ಅರ್ಪಿಸಿದ ಬಾದಾಮಿಯನ್ನು ತಿಂದ ಆರೋಪ ಹೊರಿಸಿ ಅರ್ಚಕನೊಬ್ಬ 11 ವರ್ಷದ ಬಾಲಕನನ್ನು ಸಮೀಪದಲ್ಲಿದ್ದ ಮರಕ್ಕೆ ಹಗ್ಗದಿಂದ ಕಟ್ಟಿ ಹಾಕಿದ್ದಾನೆ.

ಈ ಕುರಿತು ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತನ್ನನ್ನು ಬಿಟ್ಟುಬಿಡುವಂತೆ ಸಂತ್ರಸ್ತ ಬಾಲಕ ಅಂಗಲಾಚಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಅರ್ಚಕನ ಈ ರೀತಿಯ ಅಮಾನವೀಯ ನಡೆಗೆ ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕನ ತಂದೆ ನೀಡಿದ ದೂರಿನನ್ವಯ ಪೊಲೀಸರು, ಐಪಿಸಿ ಮತ್ತು ಎಸ್.ಸಿ/ಎಸ್.ಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

Join Whatsapp
Exit mobile version