ಅಪಘಾತವೆಸಗಿ ವೃದ್ಧನನ್ನು ರಸ್ತೆಯಲ್ಲಿ ಎಳೆದೊಯ್ದ ಸ್ಕೂಟರ್ ಸವಾರ

Prasthutha|

ಬೆಂಗಳೂರು: ಜನನಿಬಿಡ ರಸ್ತೆಯಲ್ಲಿ ಮಂಗಳವಾರ 71 ವರ್ಷದ ವ್ಯಕ್ತಿಯನ್ನು ಸ್ಕೂಟರ್’ನಿಂದ ಎಳೆದೊಯ್ದಿರುವ ಘಟನೆ ನಡೆದಿದೆ.

- Advertisement -

ಸ್ಕೂಟರ್ ಸವಾರ ಸಾಹಿಲ್ (25) ಎಂಬಾತ ವೃದ್ಧರೊಬ್ಬರು ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಮುತ್ತಪ್ಪ ಎಂಬ ವ್ಯಕ್ತಿ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಸವಾರ ದ್ವಿಚಕ್ರ ವಾಹನದೊಂದಿಗೆ ಪರಾರಿಯಾಗಲು ಯತ್ನಿಸಿದ್ದಾನೆ. ಈ ಸಮಯದಲ್ಲಿ, ವೃದ್ಧ ಮುತ್ತಪ್ಪ ಅವರು ಸ್ಕೂಟರ್’ನ ಗಾರ್ಡ್ ಅನ್ನು ಹಿಡಿದುಕೊಂಡಿದ್ದಾರೆ. ಆದರೂ  ಸವಾರ ಸ್ಕೂಟರ್ ನಿಲ್ಲಿಸದೆ ವೃದ್ಧನನ್ನು ಸ್ಕೂಟರ್ ಹಿಂದಿನಿಂದ ಎಳೆದುಕೊಂಡು ಹೋಗಿದ್ದಾನೆ.

ದ್ವಿಚಕ್ರ ವಾಹನ ಮತ್ತು ಬೊಲೆರೊ ನಡುವೆ ಸಣ್ಣ ಅಪಘಾತವಾಗಿ ಈ ಘಟನೆ ನಡೆದಿದೆ ಎಂದು ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ. ವ್ಯಕ್ತಿಗೆ ತರಚಿದ ಗಾಯಗಳಾಗಿದ್ದು, ಸ್ಕೂಟರ್ ಸವಾರನನ್ನು ಬಂಧಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version