Home ಟಾಪ್ ಸುದ್ದಿಗಳು ಅಡಿಕೆ ತೋಟದಲ್ಲಿ ಭಾರೀ ಗಾತ್ರದ ಹೆಬ್ಬಾವು; ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟ ಸ್ನೇಕ್ ಕಿರಣ್

ಅಡಿಕೆ ತೋಟದಲ್ಲಿ ಭಾರೀ ಗಾತ್ರದ ಹೆಬ್ಬಾವು; ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟ ಸ್ನೇಕ್ ಕಿರಣ್

ಶಿವಮೊಗ್ಗ: ಭಾರೀ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಟ್ಟ ಘಟನೆ ತಾಲೂಕಿನ ಗಾಜನೂರಿನಲ್ಲಿ ನಡೆದಿದೆ.

ತುಂಗಾ ಅಣೆಕಟ್ಟೆ ಬಳಿಯ ಅಡಿಕೆ ತೋಟದಲ್ಲಿ ಏಳೂವರೆ ಅಡಿ ಉದ್ದದ ಹೆಬ್ಬಾವನ್ನು ಕಂಡ ತೋಟದ ಕೆಲಸಕ್ಕೆ ಬಂದವರು ಗಾಬರಿಗೊಳಗಾಗಿದ್ದರು. ಕೂಡಲೇ ತೋಟದ ಮಾಲೀಕ ರಾಕೇಶ್, ಸ್ನೇಕ್ ಕಿರಣ್ಗೆ ಕರೆ ಮಾಡಿ ವಿಚಾರ ತಿಳಿಸಿ ಹೆಬ್ಬಾವನ್ನು ಸೆರೆ ಹಿಡಿಸಿದ್ದಾರೆ.

ಹಿಡಿಯುತ್ತಿದ್ದಂತೆಯೇ ಕೈಗೆ ಸುತ್ತಿಕೊಂಡ ಹೆಬ್ಬಾವನ್ನು ಕೆಲ ಸಮಯದ ನಂತರ ಕಿರಣ್ ನಿಧಾನವಾಗಿ ಕೈಯಿಂದ ಬಿಡಿಸಿಕೊಂಡು ಚೀಲಕ್ಕೆ ಹಾಕಿ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಕಾಡಿಗೆ ಬಿಟ್ಟರು.
ಭಾರೀ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿದ ಸ್ನೇಕ್ ಕಿರಣ್ ಅವರನ್ನು ಜನರು ಪ್ರಶಂಸಿಸಿ ಫೋಟೋ ಕ್ಲಿಕ್ಕಿಸಿಕೊಂಡರು.

Join Whatsapp
Exit mobile version