ಮಸೀದಿಗಳ ಧ್ವಂಸ ಮಾಡಿ ದೇವಸ್ಥಾನ ನಿರ್ಮಿಸುವುದಾಗಿ ಒಬ್ಬ ಮೂರ್ಖ ಹೇಳುತ್ತಾನೆ: ಸಿಎಂ

Prasthutha|

ಸಂಗೊಳ್ಳಿ: ರಾಜ್ಯದಲ್ಲಿ ಈ ಹಿಂದೆ ಆಗಿರುವ ತಪ್ಪಿನಿಂದ ದೇವಸ್ಥಾನಗಳು ಇದ್ದ ಜಾಗದಲ್ಲಿಯ ಮಸೀದಿಗಳನ್ನು ಧ್ವಂಸ ಮಾಡಿ ಮತ್ತೆ ದೇವಸ್ಥಾನಗಳನ್ನು ನಿರ್ಮಿಸುವುದಾಗಿ ಕರ್ನಾಟಕದ ಒಬ್ಬ ಮೂರ್ಖ ಹೇಳುತ್ತಾನೆ. ಇಂಥ ದಾರಿ ತಪ್ಪಿಸುವ ಮೂರ್ಖರಿಗೆ ಚಪ್ಪಾಳೆ ತಟ್ಟಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸದ ಅನಂತಕುಮಾರ ಹೆಗಡೆ ಅವರ ಹೆಸರು ಎತ್ತದೇ ಕಿಡಿಗಾರಿದ್ದಾರೆ.

- Advertisement -

ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಉತ್ಸವದಲ್ಲಿ ಮಾತನಾಡಿದ ಸಿಎಂ, ಮಸೀದಿಗಳನ್ನು ಧ್ವಂಸ ಮಾಡುವ ಬಗ್ಗೆ ಹೇಳಿಕೆ ನೀಡಿ ಇಂಥ ಮೂರ್ಖರು ದಾರಿ ತಪ್ಪಿಸುತ್ತಾರೆ. ಇಂಥವರಿಗೆ ಕೆಲವರು ಚಪ್ಪಾಳೆ ತಟ್ಟುತ್ತಾರೆ. ದಯಮಾಡಿ ಸಂಗೊಳ್ಳಿ ರಾಯಣ್ಣ ಅಂತಹವರಿಗೆ ಮಾತ್ರ ಚಪ್ಪಾಳೆ ತಟ್ಟಬೇಕು. ದಾರಿ ತಪ್ಪಿಸುವ ಮೂರ್ಖರಿಗೆ ಚಪ್ಪಾಳೆ ತಟ್ಟಬಾರದು ಎಂದು ಹೇಳಿದ್ದಾರೆ.

ಭಾರತ ದೇಶದವರು ಪರಸ್ಪರ ದ್ವೇಷ ಮಾಡಬಾರದು. ಪರಸ್ಪರ ಪ್ರೀತಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಯಾವುದೋ ಜಾತಿ, ಧರ್ಮಕ್ಕೆ ಸೇರಿದರೆ ದ್ವೇಷ ಸಾಧಿಸುತ್ತೇವೆ ಹೇಗೆ? ಪರಸ್ಪರ ಪ್ರೀತಿ, ಸೌಹಾರ್ದತೆ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದ್ದಾರೆ

Join Whatsapp
Exit mobile version