ಬೆಂಗಳೂರು: ಚೀಟಿ ಹಣದ ಹೆಸರಲ್ಲಿ 600 ಜನರಿಗೆ ವಂಚನೆ; 40 ಕೋಟಿ ರೂ ಹಣದೊಂದಿಗೆ ದಂಪತಿ ಪರಾರಿ!

- Advertisement -

ಬೆಂಗಳೂರು: ಚೀಟಿ ಹಣದ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿದ್ದ ಸುಧಾ ಹಾಗೂ ಸಿದ್ದಿಚಾರಿ ದಂಪತಿ ಇದೀಗ ಸಾರ್ವಜನಿಕರಿಗೆ ಮೋಸ ಮಾಡಿ ಹಣದೊಂದಿಗೆ ಪರಾರಿಯಾಗಿದ್ದಾರೆ.

- Advertisement -

ಬೆಂಗಳೂರಿನ ಜರಗನಹಳ್ಲಿಯಲ್ಲಿ ಘಟನೆ ನಡೆದಿದ್ದು ದಂಪತಿ ಸುಮಾರು 40 ಕೋಟಿ ರೂ. ಚೀಟಿ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ. 20 ವರ್ಷಗಳಿಂದ ಜರಗನಹಳ್ಳಿಯಲ್ಲಿ ವಾಸವಾಗಿದ್ದ ದಂಪತಿ ಚೀಟಿ ವ್ಯವಹಾರದ ಹೆಸರಲ್ಲಿ 600ಕ್ಕೂ ಹೆಚ್ಚು ಜನರಿಂದ ಹಣ ಕಟ್ಟಿಸಿಕೊಂಡಿದ್ದರು. ಇವರನ್ನು ನಂಬಿದ ಜನರು 5 ರಿಂದ 10 ಲಕ್ಷದವರೆಗೂ ಹಣ ನೀಡಿದ್ದಾರೆ. ಆರಂಭದಲ್ಲಿ ಚೀಟಿ ಹಣ ಕೊಡುತ್ತಿದ್ದ ದಂಪತಿ ಕಳೆದ ಒಂದು ವರ್ಷದಿಂದ ಹಣ ನೀಡದೇ ಸತಾಯಿಸುತ್ತಿದ್ದರು. ಕಳೆದ ತಿಂಗಳ ಜೂನ್ 3ರಂದೇ ದಂಪತಿ ಪರಾರಿಯಾಗಿದ್ದು ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೆ ದಂಪತಿಗಳ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದೆ.

- Advertisement -


Must Read

Related Articles