ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ: ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ

- Advertisement -

ಕಲಬುರಗಿ: “ಆರ್​ಎಸ್​ಎಸ್​ನಲ್ಲಿನ ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ. ಕೊಳಕು ಮನಸ್ಸು, ಕೊಳಕು ಬುದ್ದಿ, ಕೊಳಕು ನಾಲಿಗೆ ಇವರದು” ಎಂದು ಸಚಿವ ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

- Advertisement -

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾನು ಆರ್​ಎಸ್​ಎಸ್​ ಬ್ಯಾನ್​ ಮಾಡುತ್ತೇನೆ ಎಂದು ಹೇಳಿಲ್ಲ. ಮೂರು ಸಲ ಆರ್​ಎಸ್​ಎಸ್​ ಬ್ಯಾನ್​ ಆಗಿತ್ತು. ಆ ಬ್ಯಾನ್​ ತೆಗೆದು ತಪ್ಪು ಮಾಡಿದೆವು ಎಂದು ಹೇಳಿದ್ದೇನೆ. ನಾವು ಅಧಿಕಾರಕ್ಕೆ ಬಂದರೆ ಬ್ಯಾನ್‌ ಮಾಡೋಣ ತಗೋಳಿ. ಅವರಿಗೆ ಜೈಲಿಗೆ ಹೋಗಲು ಯಾಕೆ ಅಷ್ಟು ಅವಸರ. RSS ಬ್ಯಾನ್ ಮಾಡಲು 10 ಕಾರಣ ಕೊಡಿ ಎಂದು ಬಿಜೆಪಿ ಅವರು ಕೇಳುತ್ತಾರೆ. ಆರ್​ಎಸ್ಎಸ್​ ಅವರು 100 ವರ್ಷದಲ್ಲಿ ದೇಶದ ಸಬಲೀಕರಣಕ್ಕಾಗಿ ಮಾಡಿದ 10 ಒಳ್ಳೆಯ ಕೆಲಸ ಹೇಳಲಿ” ಎಂದು ಟಕ್ಕರ್​ ನೀಡಿದರು.

“ಆರ್​ಎಸ್​ಎಸ್​ ಅವರಿಗೆ 300 – 400 ಕೋಟಿ ಹಣ ಎಲ್ಲಿಂದ ಬರುತ್ತಿದೆ ಎಂಬುದು ನನಗೆ ಗೊತ್ತು. ನಾವು ಯಾವಾಗ 3 ಫಿಗರ್ ಮಾರ್ಕ್ ಬರುತ್ತದೆ, ಆ ದಿನ ಐಟಿ, ಇಡಿ ಅವರನ್ನು ನಾನು ಅಲ್ಲಿಗೆ(RSS) ಬಳಿ ಕಳುಹಿಸುತ್ತೇನೆ. ಇದನ್ನು ಹೇಳುವುದಕ್ಕೆ ನಾನು ಹೆದರುವುದಿಲ್ಲ” ಎಂದರು.

- Advertisement -


Must Read

Related Articles