Home ಟಾಪ್ ಸುದ್ದಿಗಳು ಬಣಕಲ್ ನಲ್ಲಿ 9ನೇ ವಾರ್ಷಿಕ ಈದ್ ಮಿಲಾದ್ ಕಾರ್ಯಕ್ರಮ; ಸಾಧಕರಿಗೆ ಸನ್ಮಾನ

ಬಣಕಲ್ ನಲ್ಲಿ 9ನೇ ವಾರ್ಷಿಕ ಈದ್ ಮಿಲಾದ್ ಕಾರ್ಯಕ್ರಮ; ಸಾಧಕರಿಗೆ ಸನ್ಮಾನ

ಬಣಕಲ್: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಕರುಣೆಯ ಕಡೆಗೋಲಿನಿಂದ ಜಗತ್ತನ್ನು ಬಡಿದೆಬ್ಬಿಸಿದವರು ಎಂದು ಚಕ್ ಮಕ್ಕಿಯ ಖಲಂದರಿಯ ಅನಾಥಾಶ್ರಮದ ಪ್ರಾಂಶುಪಾಲರಾದ ಮೌಲಾನಾ ಸಿನಾನ್ ಫೈಝಿ ಹೇಳಿದರು.

ಬಣಕಲ್ ಹೋಬಳಿಯ ಮಿಲಾದ್ ಟ್ರಸ್ಟ್ , ಬಣಕಲ್ ಹೋಬಳಿ ಮಟ್ಟದ ಎಲ್ಲಾ ಆರು ಮಸೀದಿಯ ಜಮಾಅತ್ ಗಳ ಸಹಯೋಗದೊಂದಿಗೆ ಬಣಕಲ್ ನಲ್ಲಿ ನಡೆದ ವಾರ್ಷಿಕ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಕುರ್ ಆನ್, ಭಗವದ್ಗೀತೆ, ಬೈಬಲ್ ಮುಂತಾದ ಧರ್ಮ ಗ್ರಂಥಗಳನ್ನು  ಪೂರ್ಣವಾಗಿ ಅರಿತವನು ಕೋಮುವಾದಿಯಾಗಲು ಸಾಧ್ಯವಿಲ್ಲ. ಸತ್ಯ ಧರ್ಮದಿಂದ ಹೇಗೆ ಜೀವಿಸಬೇಕು ಎಂಬುದನ್ನು ಮುಹಮ್ಮದ್ ಪೈಗಂಬರ್ ತೋರಿಸಿಕೊಟ್ಟಿದ್ದಾರೆ.  ಪ್ರೀತಿ, ಕರುಣೆಯಿಂದ ಪ್ರವಾದಿಗಳ ಮಾರ್ಗದರ್ಶನದಲ್ಲಿ ನಾವು ಜೀವಿಸಬೇಕಿದೆ ಎಂದು ಹೇಳಿದರು.

ಬಣಕಲ್ ಸುನ್ನೀ ಜಾಮಿಯಾ ಜುಮಾ ಮಸೀದಿಯ ಧರ್ಮಗುರುಗಳಾದ ಜನಾಬ್ ಮೌಲಾನ ಮುಹಮ್ಮದ್ ಶಾಕೀಬ್ ರಝ್ವಿ ನೂರಿ ಮಾತನಾಡಿ, ಅನ್ಯಧರ್ಮಿಯರನ್ನು ಸಹೋದರರಂತೆ ಕಾಣಿರಿ ಎಂದು ಮಹಮ್ಮದ್ ಪೈಗಂಬರ್ ಹೇಳಿದ್ದಾರೆ. ಶಾಂತಿ ಮತ್ತು ಕರುಣೆ ಜಗತ್ತನ್ನು ಸುಖವಾಗಿಡಬಲ್ಲ  ಶಕ್ತಿಯುತ ಅಸ್ತ್ರವಾಗಿದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಜನಾಬ್ ಸಿನಾನ್ ಫೈಝಿ, ಜನಾಬ್ ಮೌಲಾನ ಮಹಮ್ಮದ್ ಶಾಖಿಬ್ ರಝ್ವಿ ನೂರಿ,  ಬಣಕಲ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವಾಸುದೇವ್ ಭಟ್, ಡಾ.ಇಖ್ಲಾಸ್ ಅಹಮದ್, ಅಲ್ ಹಾಜ್ ಮಹಮ್ಮದ್ ಶಾಹಿದ್ ರಝ್ವಿ, ಅಲ್ ಹಾಜ್ ಫೈರೋಜ್ ಅಹಮದ್, ಎನ್.ಟಿ.ದಿನೇಶ್, ಡಾ.ಟಿ.ಎಂ.ನಾಸೀರ್, ಡಾ.ಫೈರೋಜ್ ಅಹಮದ್, ಹೆಸಗಲ್ ವೆಂಕಟೇಶ್, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೊಟ್ಟಿಗೆಹಾರ ಬದ್ರಿಯ ಜುಮ್ಮಾ ಮಸೀದಿಯ ಧರ್ಮ ಗುರುಗಳಾದ ಅಬ್ದುಲ್ ರೆಹಮಾನ್ ಫೈಝಿ, ಬಣಕಲ್ ಮೋಹಿದ್ದೀನ್ ಜುಮ್ಮಾ ಮಸೀದಿಯ ಧರ್ಮ ಗುರುಗಳಾದ ಜುಬೇರ್ ದಾರಿಮಿ, ಬಣಕಲ್ ಹೋಬಳಿ ಮಿಲಾದ್ ಟ್ರಸ್ಟ್ ಅಧ್ಯಕ್ಷರಾದ ಬಿ.ಎಂ.ಆಲಿ ಹಾಜಿ, ಕಾರ್ಯಾಧ್ಯಕ್ಷರಾದ ಝಾಕೀರ್ ಹುಸೇನ್, ಕಾರ್ಯದರ್ಶಿ ಫಾರೂಕ್, ಉಪಾಧ್ಯಕ್ಷ ರಾದ ಎ. ಸಿ.ಅಯ್ಯೂಬ್, ಅಸ್ಗರ್ ಅಹಮದ್,  ಅಹಮದ್ ಬಾವ್ , ಮುಂತು ಮುಹಮ್ಮದ್ ಅಲಿ, ಹುಸೇನ್, ಸಿದ್ದೀಕ್, ಹೊರಟಿ ಜಾಮಿಯಾ ಮಸೀದಿಯ ಮೌಲಾನ ಅಲ್ಲಾ ಭಕ್ಷ್ ರಝ್ವಿ, ಹಳಿಕೆ ಜಾಮಿಯಾ ಮಸೀದಿಯ ಧರ್ಮ ಗುರು ಮೌಲಾನ ಶಾಖಿಬ್ ಹುಸೇನ್ ರಝ್ವಿ, ಚಕ್ಕಮಕ್ಕಿಯ ಖತೀಬರಾದ ಮೌಲಾನ ಜನಾಬ್ ಫೈಝಿ , ಹಾಗೂ ಟ್ರಸ್ಟ್ ನ ಎಲ್ಲಾ ಮುಖಂಡರು ಮತ್ತು ಸದಸ್ಯರುಗಳು ಭಾಗವಹಿಸಿದ್ದರು.

Join Whatsapp
Exit mobile version