ಬಿಜೆಪಿ & ಜೆಡಿಎಸ್‌ನಿಂದ 30 ಜನ ಬರ್ತಾರೆ: ಸಚಿವ ಚೆಲುವರಾಯಸ್ವಾಮಿ

Prasthutha|

ಮಂಡ್ಯ: ಜಗದೀಶ್ ಶೆಟ್ಟರ್ ಘರ್ ವಾಪಸ್ ಆದ ಕುರಿತಾಗಿ ಮಂಡ್ಯದಲ್ಲಿ ಮಾತನಾಡಿದ ಸಚಿವ ಎಂದು ಚೆಲುವರಾಯಸ್ವಾಮಿ, ಅವರು ಹೋದರೆ ಹೋಗಲಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಿಂದ 30 ಜನ ಬರುತ್ತಾರೆ ಎಂದು ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸ್ನೇಹಿತ ಅಶೋಕಣ್ಣನಿಗೆ ಹೇಳಿ ಬಿಜೆಪಿ ಹಾಗೂ ಜೆಡಿಎಸ್ ನಿಂದ 30 ಜನರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆ ಮುಂಚೆ ಕರೆದುಕೊಳ್ಳಬೇಕಾ ಅಥವಾ ಚುನಾವಣೆ ಆದಮೇಲೆ ಕರೆದುಕೊಳ್ಳಬೇಕಾ ಎಂದು ಯೋಚನೆ ಮಾಡುತ್ತಿದ್ದೇವೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಬರುವ ಕೆಲವು ಜನರ ಹೆಸರನ್ನು ಹೇಳಿದರೆ ವಿರೋಧ ಪಕ್ಷದ ನಾಯಕ ಆರ್‌ ಅಶೋಕ್‌ಗೆ ಶಾಕ್ ಆಗುತ್ತರೆ. ಸುಮ್ಮನೆ ಇವೆಲ್ಲ ಬಿಟ್ಟು ಚುನಾವಣೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕೆಂಬುದನ್ನು ನೋಡಿಕೊಳ್ಳಲಿ ಎಂದ ಚಲುರಾಯಸ್ವಾಮಿ,ಯಾವುದೇ ರೀತಿಯಾದಂತಹ ಆಪರೇಷನ್ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ವಾಲೆಂಟರಾಗಿ ಪಕ್ಷಕ್ಕೆ ಬರುತ್ತಿದ್ದಾರೆ ಎಂದು ತಿಳಿಸಿದರು.

Join Whatsapp
Exit mobile version