Home ಟಾಪ್ ಸುದ್ದಿಗಳು ವಡೋದರಾದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಘರ್ಷಣೆ, 13 ಮಂದಿ ಬಂಧನ

ವಡೋದರಾದಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆ ಘರ್ಷಣೆ, 13 ಮಂದಿ ಬಂಧನ

ವಡೋದರಾ: ಗುಜರಾತ್ ನ  ವಡೋದರಾದಲ್ಲಿ ಗಣೇಶ ಮೂರ್ತಿಯ ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದೆ.

ಪೊಲೀಸರು ತಕ್ಷಣದ ಕ್ರಮ ಕೈಗೊಂಡು, ಎರಡೂ ಕಡೆಯ 13 ಜನರನ್ನು ವಶಕ್ಕೆ ತೆಗೆದುಕೊಂಡು ಎಫ್ಐಆರ್ ದಾಖಲಿಸಿದ್ದಾರೆ.

ವಡೋದರಾದ ಮಾಂಡ್ವಿ ಬಳಿಯ ಪಾಣಿಗೇಟ್ ಪ್ರದೇಶದಲ್ಲಿ ಘಟನೆ ನಡೆದಿದೆ.

ಗಣೇಶ ವಿಗ್ರಹವನ್ನು ಪ್ರತಿಷ್ಠಾಪನೆಗಾಗಿ ತೆಗೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ತಮ್ಮೊಳಗೆ ಯಾವುದೋ ವಿಷಯದ ಬಗ್ಗೆ ವಿವಾದ ಉಂಟಾಗಿದೆ. ಬಳಿಕ  ಕಲ್ಲು ತಾರಾಟ ನಡೆದಿದೆ. ಆ ಸಮಯದಲ್ಲಿ ಮುಸ್ಲಿಮ್ ವ್ಯಕ್ತಿಗೆ ಕಲ್ಲು ತಾಗಿದ್ದು ಮತೀಯ ಘರ್ಷಣೆಗೆ ಕಾರಣವಾಗಿದೆ. ಘಟನೆಯಿಂದ ಅಪಾರ ಹಾನಿಯಾಗಿದೆ ಎನ್ನಲಾಗಿದೆ. ಘರ್ಷಣೆ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಎರಡೂ ಕಡೆಯವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Join Whatsapp
Exit mobile version