Home ಟಾಪ್ ಸುದ್ದಿಗಳು ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 347 ಕೋಟಿ ಅನುದಾನದ ಭರವಸೆ : ಸಚ್ಚಿದಾನಂದ ಮೂರ್ತಿ

ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 347 ಕೋಟಿ ಅನುದಾನದ ಭರವಸೆ : ಸಚ್ಚಿದಾನಂದ ಮೂರ್ತಿ

ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 347 ಕೋಟಿ ರೂ ಅನುದಾನವನ್ನು ಬಿಡುಗಡೆಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿರುವುದಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ನಡೆದ ಬ್ರಾಹ್ಮೀ ಸಭಾವನದ ಉದ್ಘಾಟಿಸಿ ಮಾತಾಡಿದ ಅವರು “ ಸಾಮೂಹಿಕ ವಿವಾಹ,ಜಿಲ್ಲೆಗೊಂದು ಬ್ರಾಹ್ಮಣ ಸಮುದಾಯ ಭವನ ಸೇರಿದಂತೆ ಕರ್ಮ ಕಟ್ಟಡ ,ವಸತಿ ಯೋಜನೆಗಳಿಗೆ ಸರ್ಕಾರ 347ಕೋಟಿ ರೂ ಹಂಚಿಕೆ ನೀಡುವುದಾಗಿ ಭರವಸೆ ನೀಡಿದೆ” ಎಂದು ಅವರು ಹೇಳಿದ್ದಾರೆ.

ಶಾಸಕ ಕೆ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಪಲಿಮಾರು ಶ್ರೀ ವಿದ್ಯಾಧೀಷ ತೀರ್ಥ ಸ್ವಾಮೀಜಿ, ಕಣಿಯೂರು ಶ್ರೀ ವಿದ್ಯಾವಾಲ್ಲಭ ತೀರ್ಥ ಸ್ವಾಮೀಜಿ ಮತ್ತು ಇನ್ನಿತರರು ಭಾಗವಹಿಸಿದ್ದರು.

Join Whatsapp
Exit mobile version