Home ಕರಾವಳಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಜಾರಿ ಬಿದ್ದು ಯುವಕ ಮೃತ್ಯು

ನೀರಿನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಜಾರಿ ಬಿದ್ದು ಯುವಕ ಮೃತ್ಯು

ಕಾಸರಗೋಡು: ನೀರಿನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದು ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಜೆ ಮಂಜೇಶ್ವರದಲ್ಲಿ ನಡೆದಿದೆ.


ಮಂಜೇಶ್ವರ ಕರೋಡ ನಿವಾಸಿ ಫವಾಝ್ (21) ಮೃತ ಯುವಕ. ಮಂಜೇಶ್ವರ ಖಾಸಗಿ ಶಾಲೆಯ ಬಸ್ ನೌಕರನಾಗಿರುವ ಫವಾಝ್, ಹಾಗೂ ಇನ್ನೊಬ್ಬ ಯುವಕ ಶಾಲೆಯ ಕಟ್ಟಡ ಮೇಲೆ ಇರುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲು ಮೇಲಕ್ಕೇರಿದ್ದರು. ಈ ಸಂದರ್ಭದಲ್ಲಿ ಫವಾಝ್ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ.


ಕೂಡಲೇ ಶಾಲಾ ಸಿಬ್ಬಂದಿಗಳು, ನಾಗರಿಕರು ಫವಾಝ್’ನನ್ನು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಸ್ಥಳಕ್ಕೆ ಧಾವಿಸಿದ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp
Exit mobile version