Home ಕರಾವಳಿ ಬೆಳ್ತಂಗಡಿ: ಸ್ನಾನಕ್ಕೆಂದು ಹೊಳೆಗೆ ಇಳಿದ ಯುವಕ ನೀರಿನಲ್ಲಿ ಸಿಲುಕಿ ಮೃತ್ಯು!

ಬೆಳ್ತಂಗಡಿ: ಸ್ನಾನಕ್ಕೆಂದು ಹೊಳೆಗೆ ಇಳಿದ ಯುವಕ ನೀರಿನಲ್ಲಿ ಸಿಲುಕಿ ಮೃತ್ಯು!

ಬೆಳ್ತಂಗಡಿ: ಸ್ನಾನ ಮಾಡಲೆಂದು ಹೊಳೆಗೆ ಇಳಿದಿದ್ದ ಯುವಕ ನೀರಿನಲ್ಲಿ ಸಿಲುಕಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುತ್ರೊಟ್ಟು ಎಂಬಲ್ಲಿ ನಡೆದಿದೆ.

ಮೃತಪಟ್ಟ ಯುವಕನನ್ನು ಲಾಯಿಲ ಗ್ರಾಮದ ಕಾಶಿಬೆಟ್ಟು ನಿವಾಸಿ ಇಸ್ಮಾಯಿಲ್ ಎಂಬವರ ಮಗ ನಬಾನ್(22) ಎಂದು ಗುರುತಿಸಲಾಗಿದೆ.

 ಸ್ನಾನ ಮಾಡಲೆಂದು ಮೂವರು ಗೆಳೆಯರೊಂದಿಗೆ ಕುತ್ರೊಟ್ಟು ದೇವರಗುಂಡಿ ಹೊಳೆಗೆ ಇಳಿದಿದ್ದ ನಬಾನ್ ನೀರಿನಲ್ಲಿ ಸಿಲುಕಿದ್ದಾನೆ ಎಂದು ವರದಿಯಾಗಿದೆ.

ಕೂಡಲೇ ಸ್ಥಳೀಯರ ಸಹಾಯದಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾನೆ.

ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಶವಾಗಾರದಲ್ಲಿ ಇರಿಸಲಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version