Home ಟಾಪ್ ಸುದ್ದಿಗಳು ಬಿಜೆಪಿಯೊಂದಿಗೆ ಹೊಂದಾಣಿಕೆಗೆ ಮುಂದಾದರೆ ಶಿವಸೇನೆಯನ್ನು ಪುನರ್ ಸಂಘಟಿಸುತ್ತೇವೆ; ಬಂಡಾಯ ಶಾಸಕ

ಬಿಜೆಪಿಯೊಂದಿಗೆ ಹೊಂದಾಣಿಕೆಗೆ ಮುಂದಾದರೆ ಶಿವಸೇನೆಯನ್ನು ಪುನರ್ ಸಂಘಟಿಸುತ್ತೇವೆ; ಬಂಡಾಯ ಶಾಸಕ

ಮುಂಬೈ: ಉದ್ಧವ ಠಾಕ್ರೆ ಅವರು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಲಿ ಮತ್ತು ನಾವು ಶಿವಸೇನೆಯನ್ನು ಪುನರ್ ಸಂಘಟಿಸುತ್ತೇವೆ ಎಂದು ಬಂಡಾಯ ಶಾಸಕ ಏಕನಾಥ್ ಶಿಂಧೆ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ವಿಶ್ವಾಸಮತ ನಡೆಸುವಂತೆ ಸಂಸದ ಸಂಜತ್ ರಾವತ್ ಅವರನ್ನು ಆಗ್ರಹಿಸಿದ ಶಿಂಧೆ, ನಾವು ಇಟ್ಟ ಹೆಜ್ಜೆ ಹಿಂದೆ ತೆಗೆಯೋದಿಲ್ಲ. ಪ್ರಸಕ್ತ ಚಾಲ್ತಿಯಲ್ಲಿರುವ ಮೈತ್ರಿಯನ್ನು ಮುರಿದು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಲು ಉದ್ಧವ್ ಠಾಕ್ರೆ ಮುಂದಾಗಲಿ ಎಂದು ಸೂಚಿಸಿದ್ದಾರೆ.

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ರಾವತ್, ಉದ್ಧವ್ ಠಾಕ್ರೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಎಲ್ಲಾ ಬಂಡಾಯ ಶಾಸಕರು ಸದನದ ಮಹಡಿಗೆ ಬರಲಿ. ನಾವು ಅವರನ್ನು ನೋಡಿಕೊಳ್ಳುತ್ತೇವೆ. ಇನ್ನು ಮುಂದಕ್ಕೆ ಅವರಿಗೆ ಮಹಾರಾಷ್ಟ್ರದಲ್ಲಿರಲು ಕಷ್ಟವಾಗಲಿದೆ ಎಂದು ತಿಳಿಸಿದ್ದಾರೆ.

Join Whatsapp
Exit mobile version