ಸಿಡಿದೆದ್ದ ಶಾಸಕರು | ಹೆಚ್ಚುತ್ತಲೇ ಇದೆ ಅಸಮಾಧಾನಿತರ ಸಂಖ್ಯೆ; ಯಡ್ಡಿ ವಿರುದ್ಧ ತಿರುಗಿಬಿದ್ದ ಶಾಸಕರ ಸಂಖ್ಯೆ ಎಷ್ಟು ಗೊತ್ತಾ?

Prasthutha|

ಬೆಂಗಳೂರು : ಸಿಎಂ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಯ ಹಿನ್ನೆಲೆಯಲ್ಲಿ, ಬಿಜೆಪಿಯೊಳಗೆ ಅಸಮಾಧಾನಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಲ್ಲಿ ವರೆಗೆ 12 ಬಿಜೆಪಿ ಮುಖಂಡರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ ಎಂದು ವರದಿಗಳು ತಿಳಿಸುತ್ತಿವೆ.   

- Advertisement -

ಎಂಎಲ್ಸಿ ಎಚ್. ವಿಶ್ವನಾಥ್, ಶಾಸಕರುಗಳಾದ ಬಸನಗೌಡ ಪಾಟೀಲ್ ಯತ್ನಾಳ್, ಸತೀಶ್ ರೆಡ್ಡಿ, ಮಹೇಶ್ ಕುಮಟಳ್ಳಿ, ತಿಪ್ಪಾರೆಡ್ಡಿ, ರಾಜು ಗೌಡ, ಎಚ್. ನಾಗೇಶ್ ಸೇರಿದಂತೆ 12 ಶಾಸಕರು ಅಸಮಾಧಾನ ಬಹಿರಂಗವಾಗಿಯೇ ಹೊರಹಾಕಿದ್ದಾರೆ.

ಕ್ಷಣಕ್ಷಣಕ್ಕೂ ಬಿಜೆಪಿಯಲ್ಲಿ ಅಸಮಾಧಾನಿತ ಶಾಸಕರುಗಳ ಸಂಖ್ಯೆ ಹೆಚ್ಚುತ್ತಿದ್ದು, ಮುಂದೆ ಇದು ಯಡಿಯೂರಪ್ಪ ಸರಕಾರವನ್ನು ಕೆಡವುವ ಹಂತಕ್ಕೆ ತಲುಪಿದರೂ ಅಚ್ಚರಿಯಿಲ್ಲ. ಯಡಿಯೂರಪ್ಪ ಈಗಾಗಲೇ ಸಚಿವ ಸಂಪುಟ ರಚಿಸಲು ಸಾಕಷ್ಟು ಕಸರತ್ತು ಮಾಡಿದ್ದರೂ, ಈಗ ಬೇರೆ ಪಕ್ಷಗಳಿಂದ ತಮ್ಮ ಪಕ್ಷಕ್ಕೆ ಸೇರಿಸಿಕೊಂಡ ಶಾಸಕರನ್ನು ಸಚಿವರನ್ನಾಗಿಸುವ ಅನಿವಾರ್ಯದಲ್ಲಿ ಸ್ವಪಕ್ಷೀಯರಿಂದಲೇ ನಿಂದನೆಗೆ ಗುರಿಯಾಗುತ್ತಿದ್ದಾರೆ.     

Join Whatsapp