Home ಟಾಪ್ ಸುದ್ದಿಗಳು ವಿಶ್ವ ಹೃದಯ ದಿನ: ಹೃದಯಾಘಾತದ ಕುರಿತು ಜನರಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ- ಡಾ. ವಿವೇಕ್...

ವಿಶ್ವ ಹೃದಯ ದಿನ: ಹೃದಯಾಘಾತದ ಕುರಿತು ಜನರಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ- ಡಾ. ವಿವೇಕ್ ಜವಳಿ

ಬೆಂಗಳೂರು: ಇಂದು ಹೃದಯಾಘಾತದ ಪ್ರಮಾಣ ಹೆಚ್ಚಳವಾಗುತ್ತಿದ್ದು, ಈ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದು ಫೊರ್ಟಿಸ್ ಆಸ್ಪತ್ರೆ ಹೃದಯತಜ್ಞ ಡಾ. ವಿವೇಕ್ ಜವಳಿ ತಿಳಿಸಿದರು.

ಫೊರ್ಟಿಸ್ ಆಸ್ಪತ್ರೆಯಲ್ಲಿ ಇಂಡಿಯನ್ ಅಸೋಸಿಯೇಷನ್ ಆಫ್ ಕಾರ್ಡಿಯೋವಾಸ್ಕುಲರ್-ಥೋರಾಸಿಕ್ (IACTS) ಫೊರ್ಟಿಸ್ ಆಸ್ಪತ್ರೆ ಸಹಯೋಗದಲ್ಲಿ ಹೃದಯಾಘಾತದ ಕುರಿತು ಜಾಗೃತಿ ಹಾಗೂ ಔಟ್ ರೀಚ್ ಕಾರ್ಯಕ್ರಮವನ್ನು ಆಯೋಜಿಸಿತ್ತು, ಈ ವೇಳೆ ಮಾತನಾಡಿದ ಡಾ. ವಿವೇಕ್ ಜವಳಿ, ಅನಾರೋಗ್ಯಕರ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಿಂದ ಇಂದು ವಯಸ್ಸಿನ ಮಿತಿ ಇಲ್ಲದೇ ಹೃದಯಾಘಾತ ಹೆಚ್ಚಳವಾಗುತ್ತಿದೆ. ಅದರಲ್ಲೂ ಯುವಕರು ಇದಕ್ಕೆ ಬಲಿಯಾಗುತ್ತಿರುವುದು ಶೋಚನೀಯ. ಹೀಗಾಗಿ ಹೃದಯಾಘಾತ, ಹೃದಯಸ್ತಂಭನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜರೂರತ್ತು ಕಾಣುತ್ತಿದೆ. ಕೆಲವರಿಗೇ ಈಗಲೂ ಹೃದಯಾಘಾತದ ಲಕ್ಷಣಗಳು ತಿಳಿದಿಲ್ಲ. ಎದೆನೋವನ್ನು ಗ್ಯಾಸ್ಟ್ರೀಕ್ ನೋವೆಂದು ನಿರ್ಲಕ್ಷಿಸಿಬಿಡುತ್ತಾರೆ. ಹೃದಯಾಘಾತವಾದ ಸಂದರ್ಭದಲ್ಲಿ ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ತೆರಳುವುದರಿಂದ ಹೃದಯ ಮಸಲ್ಸ್ ಸಾಯುವುದನ್ನು ನಿಯಂತ್ರಿಸಬಹುದು. ಹೀಗಾಗಿ ಪ್ರತಿಯೊಬ್ಬರಿಗೂ ಇದರ ಬಗ್ಗೆ ಜಾಗೃತಿ ಮೂಡಿಸಬೇಕು.

ಹಿಂದೆಲ್ಲಾ ವಿದೇಶಗಳಲ್ಲಿ ಹೃದಯಾಘಾತ ಹೆಚ್ಚಾಗಿತ್ತು, ಆದರಿಂದು ಅವರು ಈ ಬಗ್ಗೆ ಜಾಗೃತರಾಗಿದ್ದೂ, ಈ ಪ್ರಮಾಣ ಸಂಪೂರ್ಣ ಕಡಿಮೆಯಾಗಿದೆ. ಆದರೆ ಭಾರತದಲ್ಲಿ ಕಳೆದ 10 ವರ್ಷದಲ್ಲಿ ಈ ಹೃದಯಾಘಾತ ಹೆಚ್ಚಳವಾಗಿದೆ. ಆಹಾರ ಕ್ರಮದ ಬಗ್ಗೆ ಈಗಲೂ ಜಾಗೃತಿ ವಹಿಸದೇ ಹೋದಲ್ಲಿ ಮುಂದಿನ ದಿನಗಳು ಇನ್ನಷ್ಟು ಭಯಾನಕವಾಗಿರಲಿದೆ ಎಂದು ಕಳವಳ ವ್ಯಕ್ತಪಡಿಸಿದರು. IACTS ಅವರು ದೇಶವ್ಯಾಪಿ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿ ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದರು.

IACTS ಕಾರ್ಯದರ್ಶಿ ಡಾ. ಹಿರೇಮಠ ಮಾತನಾಡಿ, ನಮ್ಮ ಕಾರ್ಯಕ್ರಮದ ಪ್ರಮುಖ ಉದ್ದೇಶವೆಂದರೆ ಹೃದಯಾಘಾತದ ಬಗ್ಗೆ ಅರಿವು ಮೂಡಿಸುವುದು, ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಡೆ ಈ ಬಗ್ಗೆ ಶಿಕ್ಷಣ ನೀಡಲಾಗುತ್ತದೆ. ಇದಕ್ಕೆ ವೃತ್ತಿಪರ ವೈದ್ಯರ ನೆರವಿನೊಂದಿಗೆ ಶಿಕ್ಷಣ ಕೊಡಲಾಗುವುದು ಎಂದರು.

Join Whatsapp
Exit mobile version