Home ಟಾಪ್ ಸುದ್ದಿಗಳು ಬಿಜೆಪಿ ವಿರುದ್ಧ ಪ್ರಚಾರ ಮಾಡಲು ಬಂದಿದ್ದ ರೈತರ ಸಂಘದ ಕಾರ್ಯಕರ್ತರಿಗೆ ಗ್ರಾಮಸ್ಥರಿಂದ ತರಾಟೆ

ಬಿಜೆಪಿ ವಿರುದ್ಧ ಪ್ರಚಾರ ಮಾಡಲು ಬಂದಿದ್ದ ರೈತರ ಸಂಘದ ಕಾರ್ಯಕರ್ತರಿಗೆ ಗ್ರಾಮಸ್ಥರಿಂದ ತರಾಟೆ

ಚಮರಾಜನಗರ: ಬಿಜೆಪಿ ವಿರುದ್ಧ ಪ್ರಚಾರ ಮಾಡಲು ಬಂದಿದ್ದ ರೈತರ ಸಂಘದ ಕಾರ್ಯಕರ್ತರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ಚಾಮರಾಜನಗರ ತಾಲೂಕಿನ ನಂಜೇದೇವವನಪುರದಲ್ಲಿ ನಡೆದಿದೆ.

ಮೋದಿಗೆ ಓಟ್ ಹಾಕ್ಬೇಡ ಅನ್ನೋದಕ್ಕೆ ನೀನು ಯಾವನಯ್ಯ? ಹೋಗಿ ಮಣ್ಣು ತಿನ್ನು ನಾನು ಮೋದಿಗೇನೆ ಓಟು ಹಾಕೋದು’ ಎಂದು ಗದರಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಕಾರ್ಯಕರ್ತರು. ಮೋದಿಗೆ ಓಟು ಹಾಕಿದರೆ ದೇಶ ಏನಾಗುತ್ತಾ ಗೊತ್ತಾ? ಎಂದು ಪ್ರಶ್ನಿಸಿದ್ದಾರೆ, ಅದಕ್ಕೆ ಗ್ರಾಮಸ್ಥರು, ‘ಜಾಸ್ತಿ ಮಾತಾಡಬೇಡ, ಹೋಗ್ತಾ ಇರು, ನಾವು ಮೋದಿಗೆನೇ ಓಟು ಹಾಕೋದು ಇಲ್ಲಿಂದ ಜಾಗ ಖಾಲಿ ಮಾಡಿ ಅಂತಾ ವಾರ್ನಿಂಗ್ ಮಾಡಿದ್ದಾರೆ.

ಮಾತಿಗೆ ಮಾತು ಬೆಳೆದು ಗ್ರಾಮಸ್ಥರು ರೊಚ್ಚಿಗೆಳುವ ಮುನ್ನ ರೈತ ಸಂಘದ ಕಾರ್ಯಕರ್ತರು ಗ್ರಾಮದಿಂದ ವಾಪಸ್ ಹೋಗಿದ್ದಾರೆ.

Join Whatsapp
Exit mobile version