Home ಟಾಪ್ ಸುದ್ದಿಗಳು ಹಾವು ಕಡಿದು ಮಹಿಳೆ ಮೃತ್ಯು

ಹಾವು ಕಡಿದು ಮಹಿಳೆ ಮೃತ್ಯು

ಬೆಂಗಳೂರು: ಮಹಿಳೆಯೊಬ್ಬರು ಹಾವು ಕಚ್ಚಿ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೇ ಮೃತಪಟ್ಟಿರುವ ದಾರುಣ ಘಟನೆ ರಾಮನಗರದ ಕೈಲಾಂಚ ಹೋಬಳಿಯ ನಾಗೋಹಳ್ಳಿ ಗ್ರಾಮದಲ್ಲಿ ನಡೆದಿದೆ.

ನಾಗೋಹಳ್ಳಿಯ ಆಶಾ ರಾಣಿ (33) ಮೃತಪಟ್ಟವರು. ಮನೆ ಹಿತ್ತಲಿನಲ್ಲಿ ತೋಟದ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವಿಷದ ಹಾವು ಕಚ್ಚಿದ್ದು, ಈ ವೇಳೆ ನೋವು ಭಯದಿಂದ ಕಿರುಚಿ ಹಿತ್ತಲಿನಿಂದ ಅವರು ಮನೆ ಮುಂಭಾಗಕ್ಕೆ ಓಡಿ ಬಂದಿದ್ದಾರೆ. ಕೂಡಲೇ ಅಕ್ಕಪಕ್ಕದ ಜನರು ಚಿಕಿತ್ಸೆಗಾಗಿ ವಾಹನದಲ್ಲಿ ಕೈಲಾಂಚ ಆಸ್ಪತ್ರೆಯತ್ತ ಕರೆದೊಯ್ದಿದ್ದರೂ ಅಲ್ಲಿ ವೈದ್ಯರು ಸಿಗದ ಹಿನ್ನೆ ಲೆಯಲ್ಲಿ ರಾಮನಗರ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಮೃತರಿಗೆ ಇಬ್ಬರು ಮಕ್ಕಳಿದ್ದು ಮಗ 9 ನೇ ತರಗತಿ, ಮಗಳು 6 ನೇ ತರಗತಿಯಲ್ಲಿ ಓದುತ್ತಿದ್ದಾರೆ. ಪತಿ ಪೈಂಟರ್ ವೃತ್ತಿ ಮಾಡುತ್ತಿದ್ದಾರೆ.

ಈ ಬಗ್ಗೆ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version