Home ಕರಾವಳಿ ಉಡುಪಿ | ಬಿಜೆಪಿ ಪಂಚಾಯತ್ ಸದಸ್ಯನಿಂದ ಮಾರಣಾಂತಿಕ ಹಲ್ಲೆ: ರಕ್ತಮಯವಾದ ಮಹಿಳೆ

ಉಡುಪಿ | ಬಿಜೆಪಿ ಪಂಚಾಯತ್ ಸದಸ್ಯನಿಂದ ಮಾರಣಾಂತಿಕ ಹಲ್ಲೆ: ರಕ್ತಮಯವಾದ ಮಹಿಳೆ

ಉಡುಪಿ: ಬಿಜೆಪಿಯ ಪಂಚಾಯತ್ ಸದಸ್ಯನೋರ್ವ ಮಹಿಳೆಯೋರ್ವರ ಜಾಗದಲ್ಲಿ ಅಕ್ರಮ ರಸ್ತೆ ನಿರ್ಮಿಸಲು ಯತ್ನಿಸಿದ್ದು, ಅದನ್ನು ತಡೆದ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಆತ್ರಾಡಿ ಪರೀಕದ ಪಡುಮನೆ ನಾಗಬನ ಬಳಿ ನಡೆದಿದೆ.

ಆತ್ರಾಡಿಯ ಆರತಿ ಹಲ್ಲೆಗೊಳಗಾದ ಮಹಿಳೆಯಾಗಿದ್ದು, ಹಲ್ಲೆಯ ತೀವ್ರತೆಗೆ ಆಕೆ ರಕ್ತಮಯವಾಗಿದ್ದಾರೆ. ಅಕ್ರಮವಾಗಿ ರಸ್ತೆ ಕಾಮಗಾರಿಗೆ ಪ್ರಾರಂಭಸಿದನ್ನು ಆರತಿಯವರು ಪ್ರಶ್ನಿಸಿದಕ್ಕೆ ಕೋಪಗೊಂಡ ಬಿಜೆಪಿ ಪಂಚಾಯತ್ ಸದಸ್ಯ ರತ್ನಾಕರ್ ಶೆಟ್ಟಿ ಆರತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಬಿಜೆಪಿ ಪಂಚಾಯತ್ ಸದಸ್ಯ ರತ್ನಾಕರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸಂತೋಷ ಪೂಜಾರಿ ಆರತಿಯವರಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ. ಆರತಿ ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Join Whatsapp
Exit mobile version