Home ಟಾಪ್ ಸುದ್ದಿಗಳು ಮಠ ಮಾನ್ಯಗಳಿಗೆ ಸರಕಾರ ನೀಡಿದ ದೇಣಿಗೆ ಹಿಂಪಡೆದು, ಕೊರೊನಾ ನಿರ್ವಹಣೆಗೆ ಬಳಸಿ – ವಿಶ್ವನಾಥ್‌ ಸಲಹೆ

ಮಠ ಮಾನ್ಯಗಳಿಗೆ ಸರಕಾರ ನೀಡಿದ ದೇಣಿಗೆ ಹಿಂಪಡೆದು, ಕೊರೊನಾ ನಿರ್ವಹಣೆಗೆ ಬಳಸಿ – ವಿಶ್ವನಾಥ್‌ ಸಲಹೆ

ಸರಕಾರದ ಖಜಾನೆಯಿಂದ ಮಠ ಮಾನ್ಯಗಳಿಗೆ ಸಾಕಷ್ಟು ಹಣ ನೀಡಲಾಗಿದೆ. ಈಗ ಈ ಕೊರೊನಾ ಸಂಕಷ್ಟದಲ್ಲಿ ಸರಕಾರ ನೀಡಿದ ಹಣ ವಾಪಾಸ್‌ ಕೇಳಿ, ಅದನ್ನು ಕೊರೊನಾ ಸಂಕಷ್ಟದ ಪರಿಹಾರಕ್ಕಾಗಿ ಬಳಸಿಕೊಳ್ಳಿ ಎಂದು ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ್ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ”ಈ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕಿದೆ. ಈ ಹಿನ್ನೆಲೆ ಮಠ ಮಾನ್ಯಗಳಿಂದ ಹಣ ವಾಪಾಸ್‌ ಕೇಳಿ” ಎಂದು ಹೇಳಿದ ಅವರು, ”ಈ ಕೊರೊನಾ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಲು ಮಠ ಮಾನ್ಯಗಳು ಮುಂದೆ ಬರಬೇಕು. ತೀರಾ ಸಂಕಷ್ಟದಲ್ಲಿರುವ ಜನರಿಗೆ ಊಟ, ಔಷಧಿ ಮೊದಲಾದವುಗಳಿಗೆ ಸಹಾಯ ಮಾಡಬೇಕು” ಎಂದು ಮನವಿ ಮಾಡಿದರು.

ಬೆಡ್‌ ಬ್ಲಾಕಿಂಗ್‌ ಬಗ್ಗೆ ಮಾತನಾಡಿದ ಅವರು, ”ಓರ್ವ ಸಂಸದ ಹಗರಣವನ್ನು ಬಯಲು ಮಾಡಬೇಕಾದ ಸ್ಥಿತಿ ಬಂದಿದೆಯೇ? ಸರ್ಕಾರಕ್ಕೆ ಯಾವ ಮಾನ ಮರ್ಯಾದೆಯೂ ಇಲ್ಲವೇ? ಸರ್ಕಾರ ಏನು ಮಾಡುತ್ತಿದೆ?” ಎಂದು ತನ್ನದೇ ಪಕ್ಷದ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

Join Whatsapp
Exit mobile version