Home ಟಾಪ್ ಸುದ್ದಿಗಳು ಗಂಡನ ಸಾವಿನಿಂದ ಖಿನ್ನತೆ: ಪತ್ನಿ ಆತ್ಮಹತ್ಯೆ

ಗಂಡನ ಸಾವಿನಿಂದ ಖಿನ್ನತೆ: ಪತ್ನಿ ಆತ್ಮಹತ್ಯೆ

ಬೆಂಗಳೂರು: ಗಂಡನ ಸಾವಿನ ನೋವಿನಿಂದ‌ ಹೊರಬರಲಾಗದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸೌಂದರ್ಯ (24) ಆತ್ಮಹತ್ಯೆ ಮಾಡಿಕೊಂಡಿರುವ ಗೃಹಿಣಿ ಎಂದು ತಿಳಿದು ಬಂದಿದೆ.‌ ನಿನ್ನೆ‌ ಮಧ್ಯಾಹ್ನ ಕಾಡುಗೋಡಿಯ ಓಫಾರಂ ಬಳಿಯಿರುವ ಮನೆಯಲ್ಲಿ ಯಾರೂ ಇಲ್ಲದಿರುವಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಳಿಗೆ ಒಂದೂವರೆ ವರ್ಷದ ಗಂಡು ಮಗುವಿದೆ.‌

ಈಕೆಯ ಗಂಡ ಒಂದೂವರೆ ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದ ಮಾಗಡಿ ರೋಡ್ ನಲ್ಲಿರುವ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದಿನಿಂದ‌ ಸೌಂದರ್ಯ ತವರು ಮನೆಯಲ್ಲಿದ್ದರು. ಗಂಡನ ಸಾವಿನ ನೋವಿನಿಂದ ಹೊರಬರಲಾಗದೆ ಸೌಂದರ್ಯ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

Join Whatsapp
Exit mobile version