Home ಟಾಪ್ ಸುದ್ದಿಗಳು ಕಾಶ್ಮೀರ ಫೈಲ್ಸ್ ಸಿನಿಮಾದ ಬಗ್ಗೆ ಇದ್ದ ಆಸಕ್ತಿ ಪಂಡಿತರ ರಕ್ಷಣೆಯ ವಿಚಾರದಲ್ಲಿ ಯಾಕಿಲ್ಲ: ಪ್ರಧಾನಿಗೆ ದಿನೇಶ್...

ಕಾಶ್ಮೀರ ಫೈಲ್ಸ್ ಸಿನಿಮಾದ ಬಗ್ಗೆ ಇದ್ದ ಆಸಕ್ತಿ ಪಂಡಿತರ ರಕ್ಷಣೆಯ ವಿಚಾರದಲ್ಲಿ ಯಾಕಿಲ್ಲ: ಪ್ರಧಾನಿಗೆ ದಿನೇಶ್ ಗುಂಡೂರಾವ್ ಪ್ರಶ್ನೆ

ಬೆಂಗಳೂರು: ಕಾಶ್ಮೀರದಲ್ಲಿ ಉಗ್ರರಿಂದ ಹತ್ಯೆ ಭೀತಿಯಿಂದ ಕಾಶ್ಮೀರಿ ಪಂಡಿತರು ಸಾಮೂಹಿಕ ವಲಸೆ ಮಾಡುತ್ತಿದ್ದಾರೆ. ರಕ್ಷಣೆಗಾಗಿ ಕೇಂದ್ರದ ಬಳಿ ರೋದಿಸುತ್ತಿದ್ದಾರೆ. ಆದರೆ 56 ಇಂಚಿನ ಎದೆಯ ಪ್ರಧಾನಿಗೆ ಕಾಶ್ಮೀರ ಪಂಡಿತರ ರೋದನ ಕಾಣಿಸುತ್ತಲೇ ಇಲ್ಲ. ಕಾಶ್ಮೀರ ಫೈಲ್ಸ್ ಸಿನಿಮಾದ ಬಗ್ಗೆ ಇದ್ದ ಆಸಕ್ತಿ ಪಂಡಿತರ ರಕ್ಷಣೆಯ ವಿಚಾರದಲ್ಲಿ ಯಾಕಿಲ್ಲ.? ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೆಲದಿನಗಳಿಂದ ಕಾಶ್ಮೀರದಲ್ಲಿ ಪಂಡಿತರ ಸರಣಿ ಹತ್ಯೆ ನಡೆಯುತ್ತಿದೆ. ಕೇಂದ್ರಾಡಳಿತ ಪ್ರದೇಶ ಕಾಶ್ಮೀರ ಸಾವಿನ ಕಣಿವೆಯಾಗಿದೆ. ಈಗ ನಡೆಯುತ್ತಿರುವ ಪಂಡಿತರ ಹತ್ಯೆಗೆ ಯಾರು ಹೊಣೆ.? ಪಂಡಿತರ ಹತ್ಯೆಯ ಬಗ್ಗೆ BJPಯ ಒಬ್ಬರೇ ನಾಯಕರು ತುಟಿ ಬಿಚ್ಚುತ್ತಿಲ್ಲ. ಕಾಶ್ಮೀರ ಫೈಲ್ಸ್ -2 ಮಾಡಲು ಈಗ BJP ಯವರು ವಿವೇಕ್ ಅಗ್ನಿಹೋತ್ರಿಗೆ ಹೇಳುತ್ತಾರೆಯೆ.? ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Join Whatsapp
Exit mobile version