Home ಟಾಪ್ ಸುದ್ದಿಗಳು ಬಿಜೆಪಿಯವರು ಕೇಸರಿ ಅಥವಾ ಕಪ್ಪು ಶಾಲಾದರೂ ಹಾಕಿಕೊಳ್ಳಲಿ, ಕೇಸರಿ ಇವರೊಬ್ಬರ ಆಸ್ತಿಯಾ: ಡಿಕೆ ಶಿವಕುಮಾರ್

ಬಿಜೆಪಿಯವರು ಕೇಸರಿ ಅಥವಾ ಕಪ್ಪು ಶಾಲಾದರೂ ಹಾಕಿಕೊಳ್ಳಲಿ, ಕೇಸರಿ ಇವರೊಬ್ಬರ ಆಸ್ತಿಯಾ: ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯ ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು (ಫೆ.12) ವಿಪಕ್ಷ ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿಕೊಂಡು ಹಾಜರಾದರಲ್ಲದೆ, ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬಿಜೆಪಿಯವರು ಕೇಸರಿ ಶಾಲಾದರೂ ಹಾಕಿಕೊಳ್ಳಲಿ ಕಪ್ಪಾದರೂ ಹಾಕಿಕೊಳ್ಳಲಿ. ಕೇಸರಿ ಇವರೊಬ್ಬರ ಆಸ್ತಿಯಾ ಎಂದು ಪ್ರಶ್ನಿಸಿದರು.


ರಾಜ್ಯಪಾಲರಿಂದ ಸರ್ಕಾರವು ಸುಳ್ಳು ಭಾಷಣ ಮಾಡಿಸಿದೆ ಎಂದು ವಿಪಕ್ಷ ಬಿಜೆಪಿ ಟೀಕಿಸುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ನಾವು ರಾಜ್ಯದ ಹಿತಕ್ಕೆ ಏನು ಬೇಕೋ ಅದನ್ನು ಮಾಡುತ್ತೇವೆ ಎಂದರು. ಅಲ್ಲದೆ, ನಮ್ಮ ಗ್ಯಾರಂಟಿಗಳನ್ನೇ ಇವರು ಕಾಪಿ ಮಾಡಿದ್ದಾರೆ. ನಮ್ಮ ಗ್ಯಾರಂಟಿ ಕಾಪಿ ಮಾಡಿಯೇ ಮೋದಿ ಗ್ಯಾರಂಟಿ ಅಂತ ಮಾಡುತ್ತಿಲ್ಲವೇ? ಕರ್ನಾಟಕ ಮಾಡೆಲ್ ಅನ್ನೇ ನಾವು ಜಾರಿ ಮಾಡುತ್ತೇವೆ ಎಂದರು.

Join Whatsapp
Exit mobile version