Home ಟಾಪ್ ಸುದ್ದಿಗಳು ಸಮಸ್ಯೆ ಹೇಳಲು ಬಂದ ಯುವಕನಿಗೆ ‘ನಾನೇನು ಮಾಡೋಕೆ ಆಗುತ್ತೆ’ ಎಂದ ಬೊಮ್ಮಾಯಿ| ಸ್ಥಳದಲ್ಲೇ ಮನವಿ ಅರ್ಜಿ...

ಸಮಸ್ಯೆ ಹೇಳಲು ಬಂದ ಯುವಕನಿಗೆ ‘ನಾನೇನು ಮಾಡೋಕೆ ಆಗುತ್ತೆ’ ಎಂದ ಬೊಮ್ಮಾಯಿ| ಸ್ಥಳದಲ್ಲೇ ಮನವಿ ಅರ್ಜಿ ಹರಿದು ಹಾಕಿ ಆಕ್ರೋಶ!

ಬೆಂಗಳೂರು: ಸಮಸ್ಯೆ ಹೇಳಲು ಬಂದ ಯುವಕನಿಗೆ ‘ನಾನೇನು ಮಾಡೋಕೆ ಆಗುತ್ತೆ? ನೀವೇ ಕೋರ್ಟಿನಲ್ಲಿ ನೋಡಿಕೊಳ್ಳಿ’ ಎಂದು ಮುಖ್ಯಂಮತ್ರಿ ಬಸವರಾಜ ಬೊಮ್ಮಾಯಿ ಬೇಜವಾಬ್ದಾರಿತನದ ಹೇಳಿಕೆ ನೀಡಿದ್ದು, ಇದರಿಂದ ಆಕ್ರೋಶಗೊಂಡ ಯುವಕ ಸ್ಥಳದಲ್ಲೇ ಮನವಿ ಅರ್ಜಿ ಹರಿದು ಹಾಕಿದ ಘಟನೆ ನಡೆದಿದೆ.

ಕೆಪಿಟಿಸಿಎಲ್ ಹುದ್ದೆ ನೇಮಕಾತಿಯ ಆಕಾಂಕ್ಷಿಯೊಬ್ಬ ಸಿಎಂ ಗೃಹಕಚೇರಿ ಬಳಿ ನೇಮಕಾತಿ ಗೊಂದಲ ಸರಿಪಡಿಸುವಂತೆ ಮುಖ್ಯಂಮತ್ರಿ ಬೊಮ್ಮಾಯಿಗೆ ಮನವಿ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ನಾನೇನು ಮಾಡೋಕೆ ಆಗುತ್ತೆ? ಈ ವಿಚಾರದಲ್ಲಿ ಸ್ಟೇ ಇದೆ, ನೀವೇ ಕೋರ್ಟ್‌ನಲ್ಲಿ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

ಇದರಿಂದ ಕೋಪಗೊಂಡ ಯುವಕ ಅರ್ಜಿಯನ್ನು ಹರಿದು ಹಾಕಿ, 5-6 ವರ್ಷ ಓದಿ ಬರೆದ ಪರೀಕ್ಷೆ ನೇಮಕಾತಿ ರದ್ದು ಮಾಡಲಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾನೆ.

Join Whatsapp
Exit mobile version