Home ಟಾಪ್ ಸುದ್ದಿಗಳು ಮತ್ತೆ ಮುಂದುವರಿದ ಕ್ರೈಸ್ತರ ಮೇಲಿನ ದಾಳಿ । ಕರಪತ್ರ ಹಂಚಿದ ನೆಪದಲ್ಲಿ ಕ್ರೈಸ್ತ ಯುವಕನಿಗೆ ಸಂಘಪರಿವಾರದಿಂದ...

ಮತ್ತೆ ಮುಂದುವರಿದ ಕ್ರೈಸ್ತರ ಮೇಲಿನ ದಾಳಿ । ಕರಪತ್ರ ಹಂಚಿದ ನೆಪದಲ್ಲಿ ಕ್ರೈಸ್ತ ಯುವಕನಿಗೆ ಸಂಘಪರಿವಾರದಿಂದ ಗಂಭೀರ ಹಲ್ಲೆ

ಹಾಸನ: ಕ್ರೈಸ್ತರ ಮೇಲೆ ಮತ್ತೆ ದಾಳಿ ಮುಂದುವರಿದಿದ್ದು, ಕಾಲೇಜು ಆವರಣದ ಬಳಿ ಕ್ರೈಸ್ತ ಧರ್ಮಕ್ಕೆ ಸೇರಿದ ಕರಪತ್ರಗಳನ್ನು ಹಂಚಿದ ನೆಪದಲ್ಲಿ ಕ್ರೈಸ್ತ ಯುವಕನೊಬ್ಬನಿಗೆ ಸಂಘಪರಿವಾರದ ಕಾರ್ಯಕರ್ತರು ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಲ್ಲೆಯ ಬಳಿಕ ಸಂತ್ರಸ್ತ ಯುವಕರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಹಲ್ಲೆಗೊಳಗಾದ ಕ್ರೈಸ್ತ ಯುವಕನನ್ನು ಮನು ಎಂದು ಗುರುತಿಸಲಾಗಿದ್ದು, ಸಂಘಪರಿವಾರದ ಕಾರ್ಯಕರ್ತರು ಗಂಭೀರವಾಗಿ ಹಲ್ಲೆ ನಡೆಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಸದ್ಯ ಸಂತ್ರಸ್ತ ಮನು ಎಂಬಾತನನ್ನು ಐಪಿಸಿ ಸೆಕ್ಷನ್ 295 ಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

Join Whatsapp
Exit mobile version