ವಿನೇಶ್ ಈಗಲೇ ರಾಜಕೀಯಕ್ಕೆ ಬರಬಾರದಿತ್ತು: ಚಿಕ್ಕಪ್ಪ ಮಹಾವೀರ್ ಸಿಂಗ್

Prasthutha|

ಚಂಡೀಗಢ: ‘2028ರ ಒಲಿಂಪಿಕ್ಸ್ ನಲ್ಲಿ ವಿನೇಶ್ ಚಿನ್ನದ ಪದಕ ಗೆಲ್ಲಬೇಕು ಎಂಬುದು ನನ್ನ ಆಸೆಯಾಗಿತ್ತು. ಈ ಹಂತದಲ್ಲಿ ಅವಳು ರಾಜಕೀಯಕ್ಕೆ ಸೇರಬಾರದಿತ್ತು’ ಎಂದು ವಿನೇಶ್ ಫೋಗಟ್ ಚಿಕ್ಕಪ್ಪ, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಹೇಳಿದರು.

- Advertisement -


ಸುದ್ದಿಸಂಸ್ಥೆ ಪಿಟಿಐನೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮಹಾವೀರ್, ‘ಇತ್ತೀಚೆಗಷ್ಟೇ ವಿನೇಶ್ ಜೊತೆ ಮಾತನಾಡಿದಾಗ ಆಕೆಗೆ ರಾಜಕೀಯ ಸೇರುವ ಇರಾದೆ ಇರಲಿಲ್ಲ’ ಎಂದು ತಿಳಿಸಿದರು.
‘ಅವಳು(ವಿನೇಶ್) ಕುಸ್ತಿ ಮೇಲೆ ತನ್ನ ಗಮನ ಕೇಂದ್ರೀಕರಿಸಿ 2028ರ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಬೇಕು ಎಂಬುದು ನನ್ನ ಆಸೆಯಾಗಿತ್ತು. ಈ ಹಂತದಲ್ಲಿ ಅವಳು ರಾಜಕೀಯಕ್ಕೆ ಸೇರಬಾರದಿತ್ತು. ಅವಳು ಕುಸ್ತಿಯನ್ನು ಮುಂದುವರಿಸಬೇಕೆಂದು ನಾನು ಬಯಸುತ್ತೇನೆ’ ಎಂದು ಹೇಳಿದರು.



Join Whatsapp
Exit mobile version