ಕ್ರೀಡಾಕೂಟದ ನಡುವೆ ಯುವ ಕುಸ್ತಿಪಟುವಿಗೆ ಹಲ್ಲೆ ನಡೆಸಿದ ಬಿಜೆಪಿ ಸಂಸದ!

Prasthutha|

ರಾಂಚಿ: ಕ್ರೀಡಾಕೂಟದ ನಡುವೆ ಬಿಜೆಪಿ ಸಂಸದರೊಬ್ಬರು ಕುಸ್ತಿ ಪಟುವಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

- Advertisement -

ಸಂಸದರು ಕುಸ್ತಿಪಟುವನ್ನು ಥಳಿಸುತ್ತಿರುವ ದೃಶ್ಯಗಳು ವೈರಲಾಗುತ್ತಿದ್ದಂತೆಯೇ ಘಟನೆ ಭಾರೀ ವಿವಾದವಾಗಿದೆ.
ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರೂ ಆಗಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಕ್ಷೇತ್ರದ ಬಿಜೆಪಿ ಸಂಸದ ಬ್ರಿಜ್‌ ಭೂಷಣ್ ಶರಣ್ ಸಿಂಗ್, ಯುವ ಕುಸ್ತಿಪಟುವನ್ನು ಹಲ್ಲೆ ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ.

ರಾಂಚಿಯ ಶಹೀದ್ ಗಣಪತ್ ರಾಯ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂಡರ್ 15 ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ ಶಿಪ್‌ ನ ಮೊದಲ ದಿನದಂದು ಸಂಸದರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

- Advertisement -

ವೀಡಿಯೋ ವೀಕ್ಷಿಸಿ…

15 ವರ್ಷಕ್ಕಿಂತ ಮೇಲ್ಪಟ್ಟವನಾಗಿರುವುದರಿಂದ ಕುಸ್ತಿಪಟುವಿಗೆ ಸ್ಪರ್ಧಿಸಲು ಅವಕಾಶವಿರಲಿಲ್ಲ. ಆದರೆ, ತನಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಸಂಸದರನ್ನು ಕೇಳಿಕೊಂಡಾಗ ಯುವ ಕುಸ್ತಿಪಟುವಿಗೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.

Join Whatsapp