Home ಕರಾವಳಿ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾದ ವಾಹನ ಕಳ್ಳತನ ಆರೋಪಿ

ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾದ ವಾಹನ ಕಳ್ಳತನ ಆರೋಪಿ

ಕಾರವಾರ: ಬಟ್ಟೆ ಬದಲಿಸಿ ಬರುವ ನೆಪಮಾಡಿ ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ ವಾಹನ ಕಳ್ಳತನ ಆರೋಪಿಯೊಬ್ಬ ಪರಾರಿಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.

ಭಟ್ಕಳದ ಕೋಟೇಶ್ವರ ರಸ್ತೆಯ ಮಂಜು ಕೊರಗರ ಎಂಬ ಕಳ್ಳನ ಮನೆ ಮೇಲೆ ಖಚಿತ ಮಾಹಿತಿ  ಆಧರಿಸಿ  ಪೊಲೀಸರು ದಾಳಿ ನಡೆಸಿದ್ದರು. ಆತನ ಮನೆಯಲ್ಲಿ 25 ಸೈಕಲ್, 3 ಬೈಕ್ ಗಳನ್ನು ಜಪ್ತಿ ಮಾಡಿ ಬಂಧಿಸಿ ಠಾಣೆಗೆ ಕರೆದೊಯ್ಯುವ ವೇಳೆ ಪೊಲೀಸರಿಗೆ, ಬಟ್ಟೆ ಬದಲಿಸಿ ಬರುವುದಾಗಿ ಹೇಳಿದ್ದಾನೆ.

ಇದನ್ನು ನಂಬಿದ ಪೊಲೀಸರು ಆತನಿಗೆ ಬಟ್ಟೆ ಬದಲಿಸಲು ಅವಕಾಶ ಕಲ್ಪಿಸಿದ ಸಮಯ ಸಾಧಿಸಿ ಪೊಲೀಸರನ್ನು ಯಾಮಾರಿಸಿ  ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಪರಾರಿಯಾಗಿರುವ ಕಳ್ಳನ ಬಂಧನಕ್ಕೆ ಭಟ್ಕಳ ನಗರ ಠಾಣೆಯ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಸೈಕಲ್, ಬೈಕ್ ಕಳೆದುಕೊಂಡವರು ಸ್ಥಳಕ್ಕೆ ಆಗಮಿಸಿ ತಮ್ಮ ವಾಹನಗಳನ್ನು ಕೊಡುವಂತೆ ಪೊಲೀಸರಲ್ಲಿ ವಿನಂತಿ ಮಾಡಿದರು.

Join Whatsapp
Exit mobile version