Home ಟಾಪ್ ಸುದ್ದಿಗಳು ಉತ್ತರಾಖಂಡದಲ್ಲಿ ಹಿಮಪಾತ: 28 ಮಂದಿ ಮಂಜಿನಡಿ ಸಿಲುಕಿರುವ ಸಾಧ್ಯತೆ

ಉತ್ತರಾಖಂಡದಲ್ಲಿ ಹಿಮಪಾತ: 28 ಮಂದಿ ಮಂಜಿನಡಿ ಸಿಲುಕಿರುವ ಸಾಧ್ಯತೆ

ನವದೆಹಲಿ: ಉತ್ತರಾಖಂಡದ ದ್ರೌಪದಿ ದಂಡ- 2 ಪರ್ವತ ಶ್ರೇಣಿಯಲ್ಲಿ ಹಿಮಪಾತ ಉಂಟಾದುದರಿಂದ ಕನಿಷ್ಠ 28 ಜನರು ಹಿಮದೊಳಗೆ ಸಿಲುಕಿರುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ಮಂಗಳವಾರ ಹೇಳಿದ್ದಾರೆ.

 ಸಂರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಎಲ್ಲರೂ ಮಹಿಳೆಯರಾಗಿದ್ದು ಉತ್ತರ ಕಾಶಿಯ ನೆಹರೂ ಪರ್ವತಾರೋಹಣ ಇನ್ ಸ್ಟಿಟ್ಯೂಟ್ ನವರಾಗಿದ್ದಾರೆ. ಉತ್ತರಾಖಂಡದ ಗಡ್ವಾಲ್ ಹಿಮಾಲಯಾದ ಗಂಗೋತ್ರಿ ವಲಯದಲ್ಲಿ ಈ ಪರ್ವತಗಳಿವೆ.

“ಜಿಲ್ಲಾಡಳಿತದಿಂದ ಕ್ಷಿಪ್ರ ಕಾರ್ಯಾಚರಣೆ ಮುಂದುವರಿದಿದೆ. ಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್, ಸೇನೆ ಮತ್ತು ಐಟಿಬಿಪಿ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಎನ್ ಐಎಂ ತರಬೇತಿ ತಂಡವೂ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದೆ. ದ್ರೌಪದಿ ದಂಡ 2 ಎಂಬ ಪರ್ವತ ಕೋಡಿನ ಬಳಿ ಈ ಹಿಮಪಾತ ನಡೆದಿದೆ” ಎಂದು ದಾಮಿ ಟ್ವೀಟ್ ಮಾಡಿದ್ದಾರೆ.

“ನಾನು ಭಾರತೀಯ ವಾಯು ಪಡೆಯವರಿಗೆ ಕೂಡಲೇ ರಕ್ಷಕ ವಿಮಾನದೊಂದಿಗೆ ಅಲ್ಲಿಗೆ ಹೋಗುವಂತೆ ಆದೇಶಿಸಿದ್ದೇನೆ” ಎಂದು ಘಟನೆಯ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Join Whatsapp
Exit mobile version