ಉತ್ತರ ಪ್ರದೇಶದಲ್ಲಿ ಬಿಜೆಪಿಯ ಗೂಂಡಾ ರಾಜ್: ಮಹಿಳಾ ಅಧಿಕಾರಿಯ ಅಪಹರಣವನ್ನು ತಡೆಯಲು ಬಂದ ಮೈದುನನ ಗುಂಡಿಕ್ಕಿ ಹತ್ಯೆ!

Prasthutha|

ಮನೆಗೆ ನುಗ್ಗಿ ಬಿಜೆಪಿ ಪರ ಮತ ಚಲಾಯಿಸುವಂತೆ ಒತ್ತಡ ಹೇರುವ ಪ್ರಯತ್ನ!

- Advertisement -

ಲಕ್ನೋ: ಉತ್ತರಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯ ಕಾವು ತಾರಕಕ್ಕೇರುತ್ತಿದ್ದಂತೆಯೇ ಬ್ಲಾಕ್ ಡೆವಲಪ್ಮೆಂಟ್ ಕಮಿಟಿ ಸದಸ್ಯೆಯೊಬ್ಬರನ್ನು ಅಪಹರಿಸುತ್ತಿದ್ದಾಗ ತಡೆಯಲು ಬಂದ ಮೈದುನನನ್ನು ಬಿಜೆಪಿ ಕಾರ್ಯಕರ್ತರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಬಿಜೆಪಿ ಅಭ್ಯರ್ಥಿ ಸರಿತಾ ಯಜ್ಞ ಸೈನಿ ಅವರ ಪತಿ ಸುಧೀರ್ ಯಜ್ಞ ಸೈನಿ ಮತ್ತು ಅವರ ಅನುಯಾಯಿಗಳು ಅಭ್ಯರ್ಥಿಯ ಗನ್ ಮ್ಯಾನ್ ನೊಂದಿಗೆ ಬ್ಲಾಕ್ ಡೆವಲಪ್ಮೆಂಟ್ ಕಮಿಟಿ (ಬಿಡಿಸಿ) ಸದಸ್ಯೆ ಯದುರೈ ದೇವಿ ಅವರ ಮನೆಗೆ ತೆರಳಿದ್ದು, ಅವರು ಜುಲೈ 10 ರ ಚುನಾವಣೆಯಲ್ಲಿ ತಮ್ಮ ಪರವಾಗಿ ಮತ ಚಲಾಯಿಸಲು ಯದುರೈ ದೇವಿಯನ್ನು ಅಪಹರಿಸಲು ಯತ್ನಿಸಿದ್ದಾರೆ. ಇದನ್ನು ತಡೆಯಲು ಬಂದ ಯದುರೈ ದೇವಿಯ ಮೈದುನ ಮಾಯರಾಮಿ (60) ಅವರನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಸುಧೀರ್ ಯಜ್ಞ ಸೈನಿ ಮತ್ತು ಅವರ ಪತ್ನಿ ಸರಿತಾ ಯಜ್ಞ ಸೈನಿಯ ಗನ್ ಮ್ಯಾನ್ ಸೇರಿದಂತೆ 10 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕಿ ಸುಜಾತಾ ಸಿಂಗ್ ತಿಳಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಭದ್ರತಾ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ ಮತ್ತು ಆರೋಪಿಗಳ ಮೇಲೆ ಕಠಿಣ ರಾಷ್ಟ್ರೀಯ ಭದ್ರತಾ ಕಾನೂನು ಹೇರಲಾಗುವುದು ಎಂದು ಅವರು ಹೇಳಿದರು.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಾರ್ಟಿ ಜಿಲ್ಲಾಧ್ಯಕ್ಷ ರಾಮ್‌ ಹರ್ಷ್ ಯಾದವ್, ಪೊಲೀಸರು ಬಿಜೆಪಿಯ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕಾಗಿಯೇ ಬಿಜೆಪಿ ಕಾರ್ಯಕರ್ತರು ಇಂತಹ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

Join Whatsapp