Home ಟಾಪ್ ಸುದ್ದಿಗಳು ಇಂದು ಮಂಗಳೂರಿನಲ್ಲಿ ‘ಉರ್ದು ಮೆಹಫಿಲೇ ಮುಷಾಯಿರ’ ಕಾರ್ಯಕ್ರಮ

ಇಂದು ಮಂಗಳೂರಿನಲ್ಲಿ ‘ಉರ್ದು ಮೆಹಫಿಲೇ ಮುಷಾಯಿರ’ ಕಾರ್ಯಕ್ರಮ

ಮಂಗಳೂರು: ಇಂದು ಸಂಜೆ 6.30ಕ್ಕೆ ಮಂಗಳೂರಿನ ಪುರಭವನದಲ್ಲಿ ‘ಉರ್ದು ಮೆಹಫಿಲೇ ಮುಷಾಯಿರ’ (ಉರ್ದು ಭಾಷೆಯಲ್ಲಿ ಕಾವ್ಯ ಗೋಷ್ಠಿ ಕಾರ್ಯಕ್ರಮ) ನಡೆಯಲಿದೆ.


ಉರ್ದು ಭಾಷೆ, ಸಾಹಿತ್ಯ ಹಾಗು ಸಂಸ್ಕೃತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಿರುವ, ರಾಜ್ಯ ಹಾಗು ಹೊರರಾಜ್ಯಗಳ ಖ್ಯಾತ ಉರ್ದು ಕವಿಗಳು ಭಾಗವಹಿಸಲಿರುವ ಈ ವಿಶಿಷ್ಟ ಕಾರ್ಯಕ್ರಮ ದುಬೈನ ಪ್ರತಿಷ್ಠಿತ ಸಿ ಎಚ್ ಎಸ್ ಗ್ರೂಪ್ ನ ಸ್ಥಾಪಕ ಹಾಗು ಅಧ್ಯಕ್ಷ, ಖ್ಯಾತ ಎನ್ನಾರೈ ಉದ್ಯಮಿ ನಾಸಿರ್ ಸಯ್ಯದ್ ಅವರ ಪ್ರಾಯೋಜಕತ್ವದಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಅಂಜುಮನ್ ತರಕ್ಕೀ ಉರ್ದು ಸಂಘಟನೆಯ ಅಧ್ಯಕ್ಷ ಅಬ್ದುಲ್ ಸಲಾಂ ಮದನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version