ಉಪ್ಪಿನಂಗಡಿಯಲ್ಲಿ ಬಸ್ ನಡಿ ಸಿಲುಕಿ ತಾಯಿ ಮಗು ಮೃತ್ಯು: ವಿಕೃತಿ ಕಮೆಂಟ್ ಮಾಡಿದ್ದ ಆನಂದ್ ವಿರುದ್ಧ ಪ್ರಕರಣ ದಾಖಲು

Prasthutha|

ಉಪ್ಪಿನಂಗಡಿ: ಕೆ ಎಸ್ ಆರ್ ಟಿ ಸಿ ಬಸ್ ಹರಿದು  ಮೃತಪಟ್ಟಿರುವ ತಾಯಿ ಮಗು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್  ಮಾಡಿ ವಿಕೃತಿಯನ್ನು ಮೆರೆದ ಆರೋಪಿ ವಿರುದ್ಧ ಎಸ್ ಡಿಪಿಐ ಉಪ್ಪಿನಂಗಡಿ ವಲಯ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮಕ್ಕೆ ಆಗ್ರಹಿಸಿದೆ.

- Advertisement -

ಆನಂದ ಎಂಬಾತ  ತಾಯಿ ಮತ್ತು ಮೃತಪಟ್ಟ ಸುದ್ದಿಗೆ “ಕೆ ಎಸ್ ಆರ್ ಟಿಸಿ  ಜಯವಾಗಲಿ” ಎಂದು ವಿಕೃತವಾಗಿ ಕಮೆಂಟ್ ಮಾಡಿದ್ದು, ಈತ ಸ್ವತಃ ಡ್ರೈವರ್ ಆಗಿದ್ದಾನೆ . ಅಮಾಯಕ ಜೀವಗಳೆರಡು ಬಲಿಯಾಗಿರುವ ಬಗ್ಗೆ ಈತನ ಕಮೆಂಟ್ ನೋಡಿ ಸಾರ್ವಜನಿಕರು ವ್ಯಾಪಕವಾಗಿ ಟೀಕಿಸಿದ್ದಾರೆ .

ಈ ಬಗ್ಗೆ ಇಕ್ಬಾಲ್ ಕೆಂಪಿ ನೇತೃತ್ವದಲ್ಲಿ ಪ್ರಕರಣ ದಾಖಲಿಸಿದ್ದಾರೆ.

Join Whatsapp