ಮುಸ್ಲಿಮ್ ಬಾಲಕನನ್ನು ಹೊಡೆದು ಕೊಂದ ಶಿಕ್ಷಕರು: ತನಿಖೆ ಆರಂಭಿಸಿದ ಪೊಲೀಸ್ ಇಲಾಖೆ

Prasthutha|

ಲಕ್ನೋ: 15 ವರ್ಷದ ಮುಸ್ಲಿಮ್ ಬಾಲಕನನ್ನು ಖಾಸಗಿ ಶಾಲೆಯೊಂದರ ಮೂವರು ಶಿಕ್ಷಕರು ಕೊಠಡಿಯೊಂದಕ್ಕೆ ಬೀಗ ಹಾಕಿ ಥಳಿಸಿ ಕೊಂದ ಘಟನೆ ಉತ್ತರ ಪ್ರದೇಶದ ಕನೌಜ್ ನ ಮಾದಯ್ಯ ಗ್ರಾಮದಲ್ಲಿ ನಡೆದಿದೆ.

- Advertisement -

ವಾಚ್ ಕದ್ದ ಆರೋಪದಲ್ಲಿ ಒಂಬತ್ತನೆ ತರಗತಿಯ ವಿದ್ಯಾರ್ಥಿ ದಿಲ್ಶನ್ ಅಲಿಯಾಸ್ ರಾಜಾ ಎಂಬಾತನಿಗೆ ಚಿತ್ರಹಿಂಸೆ ನೀಡಲಾಗಿದ್ದು, ಕಾನ್ಪುರ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ದಿಲ್ಶಾನ್ ಅವರ ತಂದೆ ಜಹಾಂಗೀರ್ ಅವರು ಶಿಕ್ಷಕರಾದ ಶಿವಕುಮಾರ್, ಪ್ರಭಾಕರ್ ಮತ್ತು ವಿವೇಕ್ ಯಾದವ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

- Advertisement -

ಮರಣೋತ್ತರ ಪರೀಕ್ಷೆ ವರದಿಯ ಬಳಿಕ ಸಾವಿಗೆ ನಿಖರ ಕಾರಣ ಪತ್ತೆಯಾಗಲಿದ್ದು, ಅದರ ಆಧಾರದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version