Home ಟಾಪ್ ಸುದ್ದಿಗಳು ಮಕ್ಕಳ ಕಳ್ಳರೆಂದು ಭಾವಿಸಿ ಭೂಗರ್ಭ ಅಧಿಕಾರಿಗಳ ಮೇಲೆ ಹಲ್ಲೆ

ಮಕ್ಕಳ ಕಳ್ಳರೆಂದು ಭಾವಿಸಿ ಭೂಗರ್ಭ ಅಧಿಕಾರಿಗಳ ಮೇಲೆ ಹಲ್ಲೆ

ವಿಜಯಪುರ: ಮಕ್ಕಳ ಕಳ್ಳರೆಂದು ಶಂಕಿಸಿ ಭೂಗರ್ಭ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೇವನೂರ ತೋಟದಲ್ಲಿ ನಡೆದಿದೆ.

ಗ್ರಾಮದ ಸುತ್ತಮುತ್ತ ಖನಿಜದ ನಿಕ್ಷೇಪವಿದೆ ಎಂಬ ಮಾಹಿತಿ ಆಧರಿಸಿ ಬೆಂಗಳೂರಿನಿಂದ ಸಹಾಯಕ ಭೂ ಇಲಾಖೆ ಅಧಿಕಾರಿ ದಿನೋಮನ್‌ ತಮ್ಮ ಸಹಾಯಕರೊಂದಿಗೆ ಇಂಡಿಗೆ ಆಗಮಿಸಿದ್ದರು.ಪಟ್ಟಣದ ಇಬ್ಬರು ಪರಿಚಿತ ಯುವಕ ರೊಂದಿಗೆ ಖಾಸಗಿ ವಾಹನದಲ್ಲಿ ಗ್ರಾಮಕ್ಕೆ ತೆರಳಿದ್ದರು.

ಈ ವೇಳೆ ಗ್ರಾಮಸ್ಥರು ನೀವು ಯಾರೆಂದು ಅಧಿಕಾರಿಗಳ ಜೊತೆ ಪ್ರಶ್ನಿಸಿದ್ದರು. ಐಡಿ ಕಾರ್ಡ್‌, ಇಲಾಖೆಯ ಪತ್ರ ತೋರಿಸುವಂತೆ ಹೇಳಿದ್ದರು. ಆದರೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸದ ಕಾರಣ ಸಂಶಯಗೊಂಡ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ವಿಚಾರವನ್ನು ತಿಳಿಗೊಳಿಸಿದ್ದಾರೆ.

Join Whatsapp
Exit mobile version