ಬಿಜೆಪಿ ಶಾಸಕರ ಒತ್ತಡಕ್ಕೆ ಮಣಿದು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಅವರ ಬಂಧನ ಖಂಡನೀಯ SDPI

Prasthutha|

ಚಿತ್ರದುರ್ಗ : ಸ್ಥಳೀಯಾಡಳಿತ ಮತ್ತು ಬಿಜೆಪಿ ಶಾಸಕರ ಅವೈಜ್ಞಾನಿಕ ಕಾಮಗಾರಿಗಳ ಕುರಿತು ಜಿಲ್ಲಾಡಳಿತಕ್ಕೆ ಮನವಿ ಮಾಡಿದ ಕೆಲವೇ ಗಂಟೆಗಳಲ್ಲಿ ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಬಂಧನವನ್ನು ಎಸ್ಡಿಪಿಐ ತೀವ್ರವಾಗಿ ಖಂಡಿಸಿದ್ದಾರೆ.
ಬಾಳೆಕಾಯಿ ಶ್ರೀ ನಿವಾಸ್ ಅವರು ಚಿತ್ರದುರ್ಗದಲ್ಲಿ ಸರಕಾರ ಮತ್ತು ಸ್ಥಳೀಯ ಆಡಳಿತಗಳ ಜನ ವಿರೋಧಿ ಮತ್ತು ಭ್ರಷ್ಟ ಆಡಳಿತದ ವಿರುದ್ಧ ನಿರಂತರ ಹೋರಾಟವನ್ನು ನಡೆಸುತ್ತಿದ್ದರು. ಜಿಲ್ಲೆಯಲ್ಲಿ ಎಸ್ ಡಿ ಪಿ ಐ ಹೊರಾಟ ಮತ್ತು ಬೆಳವಣಿಗೆಯನ್ನು ಸಹಿಸಲಾಗದ ಬಿಜೆಪಿ ಶಾಸಕರು ಪೊಲೀಸ್ ಇಲಾಖೆಗೆ ಒತ್ತಡ ಹಾಕಿಸಿ ಬಾಳೆಕಾಯಿ ಶ್ರೀ ನಿವಾಸ್ ಅವರನ್ನು ಬಂಧನ ಮಾಡಿಸುವ ಮೂಲಕ ಅಧಿಕಾರದ ದುರುಪಯೋಗ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀ ನಿವಾಸರನ್ನು ಬಿಡುಗಡೆಗೊಳಿಸುವ ಎಲ್ಲಾ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಆದರೆ ಈ ರೀತಿ ಅಧಿಕಾರವರ್ಗದ ಒತ್ತಡಕ್ಕೊಳಗಾಗಿ ದಲಿತ ನಾಯಕರೊಬ್ಬರನ್ನು ಬಂಧನ ಮಾಡಲು ಮುಂದಾದ ಪೊಲೀಸ್ ಇಲಾಖೆಗೂ ನಾವು ಕಾನೂನಾತ್ಮಕ ಉತ್ತರವನ್ನು ನೀಡಲಿದ್ದೇವೆ. ಮುಂದೆ ಈ ರೀತಿಯಾಗಿ ಎಸ್ ಡಿ ಪಿ ಐ ಯನ್ನು ತಡೆಯ ಬಹುದು ಎಂಬ ಭ್ರಮೆಯಿಂದ ಚಿತ್ರದುರ್ಗದ ಪೊಲೀಸ್ ಇಲಾಖೆ ಹೊರ ಬರುವುದು ಉತ್ತಮ ಎಂದು ಎಸ್ ಡಿ ಪಿ ಐ ಎಚ್ಚರಿಕೆ ನೀಡಿದೆ

Join Whatsapp