ಉಳ್ಳಾಲ | ಇಂದು SDPI ಮಂಗಳೂರು ಕ್ಷೇತ್ರ ನಾಯಕರ ಸಮ್ಮಿಲನ ಸಭೆ

Prasthutha|

SDPI ರಾಜ್ಯ ಮುಖಂಡ ಬಿ.ಆರ್. ಬಾಸ್ಕರ್ ಪ್ರಸಾದ್ ರವರು ಇಂದು ಉಳ್ಳಾಲಕ್ಕೆ

- Advertisement -

ಉಳ್ಳಾಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು (ಉಳ್ಳಾಲ) ಕ್ಷೇತ್ರ ವ್ಯಾಪ್ತಿಯ ನಾಯಕರ ಸಮ್ಮಿಲನ ಕಾರ್ಯಕ್ರಮ (ಲೀಡರ್ಸ್ ಮೀಟ್) ಸಭೆಯು ಇಂದು ಸೆಪ್ಟೆಂಬರ್ 6 ಶುಕ್ರವಾರದಂದು ತೊಕ್ಕೊಟ್ಟು ಯುನಿಟಿ ಹಾಲ್’ನಲ್ಲಿ ನಡೆಯಲಿದೆ.

ಈ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ SDPI ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಬಾಸ್ಕರ್ ಪ್ರಸಾದ್ ರವರು ಭಾಗವಹಿಸಲಿದ್ದಾರೆ.

- Advertisement -

ಇತ್ತೀಚಿಗೆ ನಡೆದ ಎಸ್ಡಿಪಿಐ ಪಕ್ಷದ ಆಂತರಿಕ ಚುನಾವಣೆಯಲ್ಲಿ ಆಯ್ಕೆಗೊಂಡ ಬ್ರಾಂಚ್ , ಗ್ರಾಮ, ವಾರ್ಡ್, ಬ್ಲಾಕ್ ಮತ್ತು ಕ್ಷೇತ್ರ ಸಮಿತಿಯ ನೂತನ ನಾಯಕರ ಸಭೆಯನ್ನು (ಲೀಡರ್ಸ್ ಮೀಟ್) ಆಯೋಜಿಸಲಾಗಿದೆ . ಈ ಸಭೆಯಲ್ಲಿ ಮಂಗಳೂರು ಕ್ಷೇತ್ರ ವ್ಯಾಪ್ತಿಯ , ಕ್ಷೇತ್ರ ಸಮಿತಿ ಹಾಗೂ ನಗರ ಸಮಿತಿ, ಪಟ್ಟಣ ಸಮಿತಿ, ಬ್ಲಾಕ್ ಸಮಿತಿ, ಗ್ರಾಮ ಸಮಿತಿ, ವಾರ್ಡ್ ಸಮಿತಿ , ಮತ್ತು ಬ್ರಾಂಚ್ ಸಮಿತಿಯ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಕ್ಷೇತ್ರ ಸಮಿತಿ ಕಾರ್ಯದರ್ಶಿ ಹನೀಫ್ ರಂತಡ್ಕರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp
Exit mobile version