Home ಕರಾವಳಿ ಉಡುಪಿ: ಇಬ್ಬರು ನಕ್ಸಲ್‌ ರ ಬಂಧನಕ್ಕೆ ವಾರಂಟ್: 10 ಲಕ್ಷ‌ ಬಹುಮಾನ ಘೋಷಣೆ

ಉಡುಪಿ: ಇಬ್ಬರು ನಕ್ಸಲ್‌ ರ ಬಂಧನಕ್ಕೆ ವಾರಂಟ್: 10 ಲಕ್ಷ‌ ಬಹುಮಾನ ಘೋಷಣೆ

ಉಡುಪಿ: ಇಬ್ಬರು ನಕ್ಸಲ್ ವಾದಿಗಳ ಬಂಧನಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ-ಎನ್ ಐಎ ವಿಶೇಷ ನ್ಯಾಯಾಲಯದಿಂದ ವಾರಂಟ್ ಹೊರಡಿಸಲಾಗಿದ್ದು, ಮಾಹಿತಿದಾರರಿಗೆ ಪೊಲೀಸ್​ ಇಲಾಖೆ ವತಿಯಿಂದ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.

ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ಸುಂದರಿ ಅಲಿಯಾಸ್ ಗೀತಾ ಅಲಿಯಾಸ್ ಸಿಂಧು ಹಾಗೂ ರಾಯಚೂರಿನ ಅರೋಲಿಯ ಮಹೇಶ್ ಅಲಿಯಾಸ್ ಜಯಣ್ಣ ಜಾನ್ ಅಲಿಯಾಸ್ ಮಾರಪ್ಪ ತಲೆಮರೆಸಿಕೊಂಡ ಇಬ್ಬರು ನಕ್ಸಲ್‌ವಾದಿ ಆರೋಪಿಗಳಾಗಿದ್ದು, ಇವರಿಗೆ ವಾರೆಂಟ್ ಹೊರಡಿಸಲಾಗಿದೆ.

ಪ್ರಕರಣದ ಹಿನ್ನೆಲೆ: 2014 ರ ಏಪ್ರಿಲ್ 24 ರಂದು ಕೇರಳದ ವಯನಾಡು ಜಿಲ್ಲೆಯ ವೆಲ್ಲಮುಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಕ್ಸಲರಾದ ರೂಪೇಶ್, ಅನು, ಜಯಣ್ಣ, ಕನ್ಯಾ ಮತ್ತು ಸುಂದರಿ ಶಸ್ತ್ರಾಸ್ತ್ರಗಳೊಂದಿಗೆ ಆಗಮಿಸಿ ಪೊಲೀಸ್ ಅಧಿಕಾರಿ ಪ್ರಮೋದ್ ಎಂಬುವರ ಮನೆಯಲ್ಲಿ ಜೀವ ಬೆದರಿಕೆ ಒಡ್ಡಿ, ಕೆಲಸಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ಹೇರಿದ್ದರು. ಅಲ್ಲದೆ ಅವರ ಬೈಕ್‌ ಗೆ ಬೆಂಕಿ ಹಚ್ಚಿ ರಾಜ್ಯದ ವಿರುದ್ಧ ಕ್ರಾಂತಿ ನಡೆಸುವ ಬೆದರಿಕೆ ಒಡ್ಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ 2016 ರಲ್ಲೇ ಕೇರಳ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು.

Join Whatsapp
Exit mobile version