Home ಕರಾವಳಿ ಉಡುಪಿ: ಕಚೇರಿಯಲ್ಲೇ ಫೈನಾನ್ಸ್ ಮಾಲೀಕನ ಬರ್ಬರ ಹತ್ಯೆ!

ಉಡುಪಿ: ಕಚೇರಿಯಲ್ಲೇ ಫೈನಾನ್ಸ್ ಮಾಲೀಕನ ಬರ್ಬರ ಹತ್ಯೆ!

ಉಡುಪಿ, ಜು.31: ಫೈನಾನ್ಸಿಯರ್ ನನ್ನು ತಡರಾತ್ರಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರ ನಂದಿಕೇಶ್ವರ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ.

ಯಡ್ಯಾಡಿ- ಮತ್ಯಾಡಿ ನಿವಾಸಿ ಅಜೇಂದ್ರ ಶೆಟ್ಟಿ(33) ಕೊಲೆಯಾದ ಫೈನಾನ್ಸ್ ಮಾಲೀಕ. ಫೈನಾನ್ಸ್ ನಿಂದ ರಾತ್ರಿಯಾದರು ಮನೆಗೆ ಬಾರದಿರುವ ಹಿನ್ನೆಲೆಯಲ್ಲಿ ಮನೆಯವರು ಬಂದು ನೋಡುವಾಗ ರಕ್ತದ ಮಡುವಿನಲ್ಲಿ ಕಚೇರಿಯಲ್ಲಿ ಬಿದ್ದುಕೊಂಡಿದ್ದರು.

ಹಣಕಾಸು ವಿಚಾರದಲ್ಲಿ ತಲೆದೋರಿರುವ ಮನಸ್ತಾವವೇ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಇವರು ಕಳೆದ 5 ವರ್ಷಗಳಿಂದ ಪಾಲುದಾರಿಕೆಯೊಂದಿಗೆ ಡ್ರೀಮ್ ಫೈನಾನ್ಸ್ ಎಂಬ ಫೈನಾನ್ಸ್ ಸಂಸ್ಥೆಯನ್ನು ನಡೆಸುತ್ತಿದ್ದರು.  ಕೊಲೆಯ ಹಿಂದಿನ ಕಾರಣ ಪೊಲೀಸ್ ತನಿಖೆ ಯಿಂದ ಬೆಳಕಿಗೆ ಬರಬೇಕಾಗಿದೆ.

ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಘಟನಾ ಸ್ಥಳಕ್ಕೆ  ಎಸ್ಪಿ ವಿಷ್ಣುವರ್ಧನ್, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Join Whatsapp
Exit mobile version