ಉಡುಪಿ ಹಿಜಾಬ್ ವಿವಾದ: ಆನ್ಲೈನ್ ತರಗತಿಗೆ ಹಾಜರಾಗುವುದಿಲ್ಲ ಎಂದ ವಿದ್ಯಾರ್ಥಿನಿಯರು !

Prasthutha|

ಉಡುಪಿ: ಮಕ್ಕಳಿಗೆ ಶಿರವಸ್ತ್ರ ಧರಿಸಿ ತರಗತಿಗೆ ಹಾಜರಾಗಲು ಅನುವು ಮಾಡಿಕೊಡಲು ಆಗುವುದಿಲ್ಲ. ಅವರು ಆನ್ಲೈನ್ ತರಗತಿಗೆ ಹಾಜರಾಗಲಿ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ರಘುಪತಿ ಭಟ್ ಗೆ ತಿರುಗೇಟು ನೀಡಿರುವ  ವಿದ್ಯಾರ್ಥಿನಿಯರು ನಾವು ಆನ್ಲೈನ್ ತರಗತಿಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

- Advertisement -

ನಾವು ಹಿಜಾಬ್’ನೊಂದಿಗೆ ಆಫ್’ಲೈನ್ ತರಗತಿಗೆ ಹೋಗುತ್ತೇವೆ. ನಮ್ಮೊಂದಿಗೆ ತಾರತಮ್ಯ ಮಾಡಬೇಡಿ. ಶಿಕ್ಷಣ ಮತ್ತು ಹಿಜಾಬ್ ನಮ್ಮ ಹಕ್ಕು ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.

ಕಾಲೇಜಿನಲ್ಲಿ ಉಳಿದ ವಿದ್ಯಾರ್ಥಿನಿಯರು ನಮಗೆ ನೈತಿಕ ಬೆಂಬಲ ನೀಡಿದ್ದಾರೆ. ನಮ್ಮ ಮೇಲಿನ ದೌರ್ಜನ್ಯ ನೋಡಿ ಅವರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.  

Join Whatsapp
Exit mobile version