Home ಕರಾವಳಿ ಅಂಡರ್ ಪಾಸ್ ಗೆ ನುಗ್ಗಿದ ಮಳೆ ನೀರು | ಸಾರ್ವಜನಿಕರ ಆಕ್ರೋಶ; ಹಠಾತ್ ಪ್ರತಿಭಟನೆ

ಅಂಡರ್ ಪಾಸ್ ಗೆ ನುಗ್ಗಿದ ಮಳೆ ನೀರು | ಸಾರ್ವಜನಿಕರ ಆಕ್ರೋಶ; ಹಠಾತ್ ಪ್ರತಿಭಟನೆ

ಮಂಗಳೂರು : ತಲಪಾಡಿ ಉಚ್ಚಿಲ ಬಳಿ ರಾಷ್ಟ್ರೀಯ ಹೆದ್ದಾರಿಯ ರಿಲಯನ್ಸ್ ಪೆಟ್ರೋಲ್ ಪಂಪ್ ಬಳಿಯ ಅಂಡರ್ ಪಾಸ್ ನಲ್ಲಿ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಭಾರೀ ನೀರು ತುಂಬಿದ್ದು, ಪ್ರಯಾಣಕ್ಕೆ ಅಡ್ಡಿಯಾಗಿದೆ. ಹೀಗಾಗಿ ಸ್ಥಳೀಯರು ಇಂದು ಮುಂಜಾನೆ ಆಕ್ರೋಶಗೊಂಡು ಹಠಾತ್ ಪ್ರತಿಭಟನೆ ನಡೆಸಿದ ಬಗ್ಗೆ ವರದಿಯಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ರಿಲಯನ್ಸ್ ಪೆಟ್ರೋಲ್ ಪಂಪ್ ಬಳಿ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಿಸಿರುವುದೇ ಈ ಅನಾಹುತಕ್ಕೆ ಕಾರಣ ಎಂದು ಪ್ರತಿಭಟನಕಾರರು ಆಪಾದಿಸಿದ್ದಾರೆ.

Join Whatsapp
Exit mobile version