Home ಟಾಪ್ ಸುದ್ದಿಗಳು ಸಿಎಂ ಸಿದ್ದರಾಮಯ್ಯ ಭೇಟಿಯಾದ ಉಬುಂಟು ಮಹಿಳಾ ಉದ್ಯಮಿಗಳ ನಿಯೋಗ

ಸಿಎಂ ಸಿದ್ದರಾಮಯ್ಯ ಭೇಟಿಯಾದ ಉಬುಂಟು ಮಹಿಳಾ ಉದ್ಯಮಿಗಳ ನಿಯೋಗ

ಬೆಂಗಳೂರು:  ಕಾಂಬೋಡಿಯಾ ದೇಶಕ್ಕೆ ತೆರಳುತ್ತಿರುವ ಉಬುಂಟು ಮಹಿಳಾ ಉದ್ಯಮಿಗಳ ನಿಯೋಗವು ಇಂದು ಉಬುಂಟು ಅಧ್ಯಕ್ಷರು ಹಾಗೂ ಸಂಸ್ಥಾಪಕರಾದ ರತ್ನಪ್ರಭಾ ಅವರ ನೇತೃತ್ವದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.

ದೆಹಲಿ, ಜೈಪುರ, ಕೊಲ್ಕತ್ತಾ, ವಿಶಾಖಪಟ್ಟಣಂ, ಬೆಂಗಳೂರು, ಮೈಸೂರು, ಚೆನ್ನೈ, ಮುಂಬೈ ಹೈದರಾಬಾದ್, ಕೊಚ್ಚಿನ್ ಮೂಲದ ಮಹಿಳೆಯರು ನಿಯೋಗದಲ್ಲಿದ್ದು, ಇದೆ 26 – 29 ರವರೆಗೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಭಾರತ ಹಾಗೂ ಕಾಂಬೋಡಿಯಾ ಸಂಸ್ಥೆಗಳ ನಡುವೆ  5 ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ ಎಂದು ರತ್ನಪ್ರಭಾ ಅವರು ವಿವರಿಸಿದರು.

ಉಬುಂಟು ಸಂಸ್ಥಾಪಕರಾದ ರತ್ನಪ್ರಭಾ, ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷರಾದ ಛಾಯಾ ನಂಜಪ್ಪ,  ಎಫ್.ಕೆ.ಸಿ.ಸಿ.ಐ. ಸೇರಿದಂತೆ ವಿವಿಧ ಸಂಸ್ಥೆಯ ಪ್ರತಿನಿಧಿಗಳು ನಿಯೋಗದಲ್ಲಿದ್ದಾರೆ.

ಕಾಂಬೋಡಿಯಾ  ಪ್ರವಾಸ ಫಲಪ್ರದವಾಗಲಿ ಎಂದು ಮುಖ್ಯಮಂತ್ರಿಗಳು ಶುಭ ಹಾರೈಸಿದರು.

Join Whatsapp
Exit mobile version