ಇಡ್ಯಾ ಜನತಾ ಕಾಲೋನಿಯ ಮಸೀದಿಗೆ ಕಲ್ಲೆಸೆತ | ಇಬ್ಬರು ಅಪ್ರಾಪ್ತ ಬಾಲಕರ ಬಂಧನ

Prasthutha|

ಸುರತ್ಕಲ್ ಇಡ್ಯಾದ ಮಸೀದಿಗೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ. ಬಂಧಿತ ಬಾಲಕರು ಅಪ್ರಾಪ್ತರಾಗಿರುವ ಕಾರಣ ಅವರನ್ನು ಬಾಲ ನ್ಯಾಯಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ. ಕೃತ್ಯಕ್ಕೆ ಬಳಸಿದ ದ್ವಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

ಎಪ್ರಿಲ್ 4 ರಂದು ಮಧ್ಯರಾತ್ರಿ 2.40 ರ ಸುಮಾರಿಗೆ ಸುರತ್ಕಲ್ ಇಡ್ಯಾ ಸಮೀಪದ ಜನತಾ ಕಾಲೋನಿಯಲ್ಲಿರುವ ಮಸೀದಿಗೆ ದುಷ್ಕರ್ಮಿಗಳು ಕಲ್ಲು ಬಿಸಾಡಿ ಹಾನಿಯೆಸಗಿದ್ದರು. ಈ ಕುರಿತು ಮಸೀದಿ ಆಡಳಿತ ಕಮಿಟಿ ಪೊಲೀಸರಿಗೆ ದೂರು ನೀಡಿದ್ದರು. ಘಟನಾ ಸ್ಥಳದಲ್ಲಿನ ಎಲ್ಲಾ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ತನಿಖೆ ಕೈಗೊಂಡ ಪೊಲೀಸರು ನಿನ್ನೆ ಕುತ್ತೆತ್ತೂರಿನ ಇಬ್ಬರು ಬಾಲಕರನ್ನು ಬಂಧಿಸಿದ್ದಾರೆ.

Join Whatsapp