ಈಜಲು ಹೋದ ಇಬ್ಬರು ಬೌದ್ಧ ಸನ್ಯಾಸಿಗಳು ಕಾವೇರಿ ಪಾಲು

Prasthutha|

ಮೈಸೂರು: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬೌದ್ಧ ಸನ್ಯಾಸಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

- Advertisement -

ಬೌದ್ಧ ಸನ್ಯಾಸಿಗಳಾದ ಪೆನ್ನಲೆ ತೋ (18) ಹಾಗು ಫೆಮಸೀರಮಗ್ (18) ಮೃತಪಟ್ಟವರು.

ಪೆನ್ನಲೆ ತೋ ಹಾಗೂ ಫೆಮಸೀರಮಗ್ ಮೃತದೇಹಗಳನ್ನು ಕಾವೇರಿ ನದಿಯಿಂದ ಹೊರ ತೆಗೆದು ಕುಶಾಲನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ‌ಹಸ್ತಾಂತರಿಸಲಾಗಿದೆ.

- Advertisement -

ಲಾಮಾ ಕ್ಯಾಂಪಿನ ಸೆರಾಜೆ ಮುಖ್ಯಸ್ಥ ಲೋಪ್ ಸಾಂಗ್ ಹೋಜರ್ ಅವರು ಬೈಲುಕುಪ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp